ಮಜ್ಜಿಗೆ ಪ್ಯಾಕ್ಟರಿಯ ಬಾಯ್ಲರ್ ಸ್ಪೋಟ

ಮಜ್ಜಿಗೆ ಪ್ಯಾಕ್ಟರಿಯ ಬಾಯ್ಲರ್ ಸ್ಪೋಟ

ಕಾರ್ಮಿಕನಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು.. ಪರವಾನಗಿ ಇಲ್ಲದ ಪುಣ್ಯಕೋಟಿ ಪ್ಯಾಕ್ಟರಿ 

ಕೊರಟಗೆರೆ:-ತರಬೇತಿಯೇ ಇಲ್ಲದ ಕಾರ್ಮಿಕನ ಬೆಣ್ಣೆ-ತುಪ್ಪ ತೆಗೆಯಲು ನೇಮಿಸಿದ ಪುಣ್ಯಕೋಟಿ ಪ್ಯಾಕ್ಟರಿ ಮಾಲೀಕನ ದಿವ್ಯ ನಿರ್ಲಕ್ಷದಿಂದ ಮನೆಯ ಕೌಪೌಂಡಿನ ಆವರಣದಲ್ಲಿದ್ದ ಬಾಯ್ಲರ್ ಸ್ಪೋಟಗೊಂಡು ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದುರ್ಘಟನೆ ಮಂಗಳವಾರ ನಡೆದಿದೆ.ಕೊರಟಗೆರೆ ಪಟ್ಟಣದ ಹೊಸಬಡಾವಣೆಯ ಸದಾಶಿವಯ್ಯ ಎಂಬಾತನ ಪುಣ್ಯಕೋಟಿ ಪ್ಯಾಕ್ಟರಿಯಲ್ಲಿ ಬೆಂಕಿಯ ಶಾಖ ಮತ್ತು ವಿದ್ಯುತ್ ಸ್ಪರ್ಶದಿಂದ ಸೋಮವಾರ ರಾತ್ರಿ 10ಗಂಟೆಗೆ ಘಟನೆ ಜರುಗಿದೆ. ಮಾಲೀಕನ ನಿರ್ಲಕ್ಷದಿಂದ ಬಾಯ್ಲರ್ ಸ್ಪೋಟಗೊಂಡು ಮಲ್ಲೇಶಪುರದ ಕಾರ್ಮಿಕ ಯತೀಶ್‌ಗೆ ತೀರ್ವತರದ ಗಾಯಗಳಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಾಸದ ಮನೆಯಲ್ಲಿ 2016ರಲ್ಲಿ ಪ್ರಾರಂಭವಾದ ಶ್ರೀಕಂಠೇಶ್ವರ ಎಂಟರ್‌ಪ್ರೆöÊಸಸ್ ಅಡಿಯಲ್ಲಿ ಶ್ರೀಕಂಠೇಶ್ವರ ಮಿಲ್ಕ್ಡೈರಿ, ಪುಣ್ಯಕೋಟಿ ಮಜ್ಜಿಗೆ ಪ್ಯಾಕ್ಟರಿ, ಪೇಡಾ, ಜಾಮುನ್ ಸೇರಿ ಹಾಲಿನ ಉತ್ಪನ್ನಗಳ ಮಿನಿ ಕಾರ್ಖಾನೆಯೇ ಇದೆ. ಪ್ಯಾಕ್ಟರಿಯಲ್ಲಿ ಭದ್ರತಾ ಮತ್ತು ಅಗ್ನಿ ಅವಘಡ ತಪ್ಪಿಸುವ ಯಾವುದೇ ಉಪಕರಣ ಇಲ್ಲದೇ ಹತ್ತಾರು ಯಂತ್ರೋಪಕರಣ ಅಳವಡಿಸಿದ್ದು ಇದು ಸೇರಿ 3ನೇ ಬ್ಲಾಸ್ಟಿಂಗ್ ಪ್ರಕರಣ ಬೆಳಕಿಗೆ ಬಂದಿದೆ.
ಪುಣ್ಯಕೋಟಿ ಪ್ಯಾಕ್ಟರಿಗೆ ಕಾರ್ಮಿಕ ನೀರಿಕ್ಷಕ ಮತ್ತು ಮಧುಗಿರಿ ವಲಯ ಅಧಿಕಾರಿ ಬೇಟಿನೀಡಿ ನೊಟೀಸ್ ಜಾರಿ ಮಾಡಿದ್ದಾರೆ. ಸ್ಥಳಕ್ಕೆ ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಪರವಾನಗಿ ಮತ್ತು ಭದ್ರತೆಯೇ ಇಲ್ಲದೇ ಮನೆಯಲ್ಲಿಯೇ ಪ್ಯಾಕ್ಟರಿ ಮಾಡಿರುವ ಮಾಲೀಕನ ವಿರುದ್ದ ಕ್ರಮ ಕೈಗೊಂಡು ನೀಡಿರುವ ಲೇಸೆನ್ಸ್ ರದ್ದು ಮಾಡಬೇಕಿದೆ.


ಪರವಾನಗಿ ಅವಧಿಯೇ ಮುಕ್ತಾಯ..
ಶ್ರೀಕಂಠೇಶ್ವರ ಎಂಟರ್‌ಪ್ರೆöÊಸಸ್ ಮಾಲೀಕ ಸದಾಶಿವಯ್ಯ ಪಪಂಯಿAದ ಪಡೆದಿರುವ ಉದ್ದಿಮೆ ಪರವಾನಗಿ ಪತ್ರದ ಅವಧಿಯು 2024ರ ಮಾ.31ಕ್ಕೆ ಮುಕ್ತಾಯ. ಕಾರ್ಮಿಕ ಮತ್ತು ಆಹಾರ ಇಲಾಖೆಯಿಂದ ಪರವಾನಗಿ ಪಡೆದ ದಾಖಲೆಗಳೇ ಲಭ್ಯವಿಲ್ಲ. ಅಗ್ನಿಶಾಮಕ ಮತ್ತು ಬೆಸ್ಕಾಂ ಇಲಾಖೆಯ ಪರವಾನಗಿ ಜೊತೆ ಮುನ್ನೆಚ್ಚರಿಕೆ ಕ್ರಮದ ನಾಮಫಲಕಗಳೇ ಇಲ್ಲ. 3ನೇ ಸಲ ಅವಘಡ ನಡೆದ್ರು ಮಾಲೀಕನ ನಿರ್ಲಕ್ಷವೇ ಮತ್ತೊಂದು ದುರ್ಘಟನೆಗೆ ಕಾರಣ.

ಕಾರ್ಮಿಕರ ಜೀವದ ಜೊತೆ ಚೆಲ್ಲಾಟ..
ವಾಸಕ್ಕೆ ಕಟ್ಟಿಸಿದ ಮನೆಯಲ್ಲಿಯೇ ಅವೈಜ್ಞಾನಿಕವಾಗಿ ಪುಣ್ಯಕೋಟಿ ಪ್ಯಾಕ್ಟರಿ ಸ್ಥಾಪನೆ ಮಾಡಲಾಗಿದೆ. ಪ್ಯಾಕ್ಟರಿಯಲ್ಲಿ ಪ್ರತಿನಿತ್ಯ 8ಜನ ಮಹಿಳೆಯರು ಮತ್ತು 4ಜನ ಪುರುಷ ಕಾರ್ಮಿಕರು ಕೆಲಸ ಮಾಡ್ತಾರೇ. ಕಾರ್ಮಿಕರಿಗೆ ಸಂಬಳ, ಕೆಲಸದ ಅವಧಿ, ಇಎಸ್‌ಐ, ಪಿಎಫ್‌ನ ಅರಿವಿನ ಜೊತೆ ಭದ್ರತೆಯೇ ಯಕ್ಷಪ್ರಶ್ನೆ. ತಡರಾತ್ರಿ 11ಗಂಟೆತನಕ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ಮಾಲೀಕನ ದಬ್ಬಾಳಿಕೆಗೆ ಅಧಿಕಾರಿಗಳ ಕಡಿವಾಣವೇ ಇಲ್ಲದಂತಿದೆ.



ಕಾರ್ಮಿಕ, ಅಹಾರ ಮತ್ತು ಪಪಂ ಪರವಾನಗಿ ಪಡೆದು ಪುಣ್ಯಕೋಟಿ ಪ್ಯಾಕ್ಟರಿ ಪ್ರಾರಂಭ ಮಾಡಿದ್ದೇನೆ. ಪ್ರತಿನಿತ್ಯ 3ರಿಂದ 4ಜನ ದಿನಗೂಲಿ ಕೆಲಸಗಾರರು ಮುಂಜಾನೇ ಬಂದು ಸಂಜೆ ಹೋಗ್ತಾರೇ. ನನ್ನ ಮನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಓರ್ವನಿಗೆ ಗಾಯವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ನಾನೇ ಸೇರಿಸಿದ್ದೇನೆ. ಸದಾಶಿವಯ್ಯ. ಪ್ಯಾಕ್ಟರಿ ಮಾಲೀಕ. ಕೊರಟಗೆರೆ ಪುಣ್ಯಕೋಟಿ ಪ್ಯಾಕ್ಟರಿಗೆ ಉಪವಿಭಾಗ ಅಧಿಕಾರಿ ಜೊತೆ ಬೇಟಿನೀಡಿ ಕಾರ್ಮಿಕರಿಂದ ಮಾಹಿತಿ ಪಡೆಯಲಾಗಿದೆ. ಕಾರ್ಮಿಕರಿಗೆ ಭದ್ರತೆ ನೀಡುವುದು ಮಾಲೀಕನ ಕರ್ತವ್ಯ. ಪ್ರಕರಣ ತನಿಖೆಯ ಹಂತದಲ್ಲಿದ್ದು ಗಾಯಾಳು ಹೇಳಿಕೆ ಪಡೆಯಬೇಕಿದೆ. ಮಾಲೀಕನಿಗೆ ಕಾರ್ಮಿಕರ ಸಂಬಳ ಮತ್ತು ನಾಮಫಲಕದ ಮಾಹಿತಿಗೆ ನೊಟೀಸ್ ಜಾರಿ ಮಾಡಲಾಗಿದೆ.ಶ್ರೀಕಾಂತ್. ಕಾರ್ಮಿಕ ನಿರೀಕ್ಷಕ. ಕೊರಟಗೆರೆ