ರಾಜ್ಯಸರ್ಕಾರಕ್ಕೆ ಮತ್ತು ಪಠ್ಯ ಪುಸ್ತಕ ಸಮಿತಿಗೆ ಅಭಿನಂದನೆಯನ್ನು ತಿಳಿಸಿರುವ ಜಾಗತಿಕ ಲಿಂಗಾಯತ ಮಹಾಸಭಾ

ಒಂಭತ್ತನೆಯ ತರಗತಿಯ ಪಠ್ಯಪುಸ್ತಕದಲ್ಲಿ ವಿಶ್ವಗುರು ಬಸವಣ್ಣನವರ ಜಾಗತಿಕ ಮಟ್ಟದ ವಿಚಾರ ಚಿಂತನೆ ಯನ್ನು ನೈಜವಾಗಿ ತಿಳಿಸಿರುವ ರಾಜ್ಯಸರ್ಕಾರಕ್ಕೆ ಮತ್ತು ಪಠ್ಯ ಪುಸ್ತಕ ಸಮಿತಿಗೆ ಅಭಿನಂದನೆಯನ್ನು ತಿ.ನರಸೀಪುರದ ನಂಜನಗೂಡು ರಸ್ತೆಯಲ್ಲಿರುವ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು. ಸಭೆಯನ್ನು ಉದ್ದೇಶಿಸಿ ಜಾಗತಿಕ ಲಿಂಗಾಯತ ಮಹಾಸಭಾದ ಗೌರವಧ್ಯಕ್ಷರಾದ ಬಸವಯೋಗಿಪ್ರಭುಗಳು ಮಾತನಾಡಿದರು. ಹಿಂದೆ ರೋಹಿತ್ ಚಕ್ರ ತೀರ್ಥ ಮಾಡಿದ ತಪ್ಪನ್ನು ಪ್ರಸ್ತುತ ಕರ್ನಾಟಕ ರಾಜ್ಯದ ಸರ್ಕಾರ ಸರಿ ಮಾಡಿದೆ.ಬಸವಣ್ಣನವರ ನೈಜ ಚರಿತ್ರೆ ಮತ್ತು ಚಿಂತನೆಯನ್ನು ಮುಖ್ಯಮಂತ್ರಿ ಸಿದ್ಧ ರಾಮಯ್ಯ ನವರ ಸರ್ಕಾರ ಒಂಬತ್ತನೇಯ ಪಠ್ಯಪುಸ್ತಕ ದಲ್ಲಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಕಟ್ಟಿಕೊಟ್ಟಿರುವುದು ಶ್ಲಾಘನೀಯವಾಗಿದೆ.ಬಸವಣ್ಣನವರು ಜಗತ್ತಿಗೆ ಇಷ್ಟಲಿಂಗದ ಪರಿಕಲ್ಪನೆಯನ್ನು ಕೊಟ್ಟರು ಎಂಬ ಸತ್ಯಸಂಗತಿ ಮತ್ತು ಸಂದೇಶ ಮಕ್ಕಳಿಗೆ ಗೊತ್ತಾದರೆ ಬಸವಣ್ಣನವರ ವಚನ ಜಾಗತಿಕ ಮಟ್ಟದಲ್ಲಿ ತಲುಪುತ್ತವೆ. ಸರ್ಕಾರಕ್ಕೆ ಅಭಿನಂದನೆಯನ್ನು ಬಸವಯೋಗಿಪ್ರಭುಗಳು ಸಲ್ಲಿಸಿದರು. ಸರ್ಕಾರ ಯಾವುದೇ ಕಾರಣಕ್ಕೂ ಬಸವಣ್ಣನವರ ಚಿಂತನೆಯ ವಿರೋಧಿಗಳ ಮಾತಿಗೆ ಮಣೆ ಹಾಕದೇ ಒಂಬತ್ತನೇಯ ಪ್ರಸ್ತುತ ಸಮಾಜ ವಿಜ್ಞಾನ ಪಠ್ಯಪುಸ್ತಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಅಧ್ಯಾಯ ಮುಂದುವರೆಯಲಿ ಎಂದು ಹೇಳಿದರು. ವೇದಿಕೆಯಲ್ಲಿ ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ರವಿ, ಕಾರ್ಯದರ್ಶಿ ತುಂಬಲ ಬಸವಣ್ಣ , ಕುರುಬೂರು ಭೃಂಗೀಶ್, ಚೌಹಳ್ಳಿ ಲಿಂಗರಾಜಪ್ಪ, ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ಪರಶಿವ, ದೊಡ್ಡನಹುಂಡಿ ಸೋಮಶೇಖರ, ಸತೀಶ್ ಇನ್ನೂ ಪ್ರಮುಖರು ಉಪಸ್ಥಿತರಿದ್ದರು.