ಸುದ್ದಿಕಿರಣ ವರದಿ
ಶನಿವಾರ, ಜುಲೈ 23
ಕುಂಜಾರುಗಿರಿ ದುರ್ಗಾ ಸನ್ನಿಧಿಯಲ್ಲಿ ಚಾತುರ್ಮಾಸ್ಯ
ಉಡುಪಿ: ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ತಮ್ಮ 51ನೇ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ಶನಿವಾರ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಕೈಗೊಂಡರು.
ಸೆಪ್ಟೆಂಬರ್ 10ರ ವರೆಗೆ ವ್ರತ ದೀಕ್ಷೆಯಲ್ಲಿದ್ದು, ಅಂದು ಸೀಮೋಲ್ಲಂಘನ ನಡೆಸುವ ಮೂಲಕ ವ್ರತ ಸಮಾಪ್ತಿಗೊಳಿಸಲಿದ್ದಾರೆ.
ಚಾತುರ್ಮಾಸ್ಯದ ಈ ದಿನಗಳಲ್ಲಿ ಪ್ರತಿದಿನ ಸಂಜೆ 6ರಿಂದ ಶ್ರೀಗಳು ಪ್ರವಚನ ನೀಡಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ