ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 26
ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿ ಅಧ್ಯಕ್ಷರಾಗಿ ಅಜಿತ್ ಕುಮಾರ್ ಆಯ್ಕೆ
ಉಡುಪಿ: ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಪುನರಾಯ್ಕೆಯಾಗಿದ್ದಾರೆ.
ಈಚೆಗೆ ನಡೆದ ಮಂಡಳಿಯ 64ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
2022- 23ನೇ ಸಾಲಿನ ಇತರ ಪದಾಧಿಕಾರಿಗಳ ವಿವರ ಇಂತಿದೆ.
ಉಪಾಧ್ಯಕ್ಷ- ಕೆ. ಜೆ. ಗಣೇಶ್, ಕಾರ್ಯದರ್ಶಿ- ಸುನಿಲ್ ಕುಮಾರ್, ಜೊತೆ ಕಾರ್ಯದರ್ಶಿ- ಜಯ ಕೆ., ಕೋಶಾಧಿಕಾರಿ- ಎ. ನಟರಾಜ ಉಪಾಧ್ಯ.
ಸದಸ್ಯರು- ಮುರಲಿ ಕಡೆಕಾರ್, ಪ್ರವೀಣ್ ಉಪಾಧ್ಯ, ಕೆ. ಜೆ. ಕೃಷ್ಣ, ಪ್ರಕಾಶ್ ಹೆಬ್ಬಾರ್, ಡಾ| ಗಣಪತಿ ಭಟ್, ಮಂಜುನಾಥ ತೆಂಕಿಲ್ಲಾಯ, ಮಾಧವ ಕೆ., ರಮೇಶ ಸಾಲಿಯಾನ್, ಕೆ. ಜೆ. ಸುಧೀಂದ್ರ, ವಸಂತ ಪಾಲನ್ ಮತ್ತು ನಚಿಕೇತ.
ಸಲಹಾ ಸಮಿತಿ ಸದಸ್ಯರು- ಎಸ್. ವಿ. ಭಟ್, ನಾರಾಯಣ ಎಂ. ಹೆಗಡೆ, ಶ್ರೀರಮಣ ಆಚಾರ್ಯ, ವಿಜಯ್ ಕುಮಾರ್, ವಿಠಲ ಗಾಣಿಗ, ವಿದ್ಯಾ ಪ್ರಸಾದ್, ಅರವಿಂದ ಆಚಾರ್ಯ, ಪ್ರಶಾಂತ್ ಕೆ. ಎಸ್., ರಾಘವೇಂದ್ರ ಸೋಮಯಾಜಿ, ಜಗದೀಶ ಆಚಾರ್ಯ ಮತ್ತು ಎ. ಸತ್ಯಜಿತ್ ಉಪಾಧ್ಯ.
ಗೌರವ ಸಲಹೆಗಾರ- ಎ. ರಾಘವೇಂದ್ರ ಉಪಾಧ್ಯ.
ಜಯ ಕೆ. ಗತ ಸಭೆಯ ವರದಿ ಮಂಡಿಸಿದರು. ಎ. ನಟರಾಜ ಉಪಾಧ್ಯ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಗಣೇಶ್ ಹೆಬ್ಬಾರ್ ಅವರನ್ನು ಲೆಕ್ಕಪರಿಶೋಧಕರನ್ನಾಗಿ ನಿಯುಕ್ತಿಗೊಳಿಸಲಾಯಿತು. ಕಾರ್ಯದರ್ಶಿ ಸುನಿಲ್ ಕುಮಾರ್ ವಂದಿಸಿದರು