ಕೃಷ್ಣರಾಜಪೇಟೆ
ರೈತ ಸಂಘಟನೆಗೆ ಉತ್ತರ ನೀಡಲಾರದೆ ಹಿಂಬಾಗಿಲಿನಿಂದ ಹೋಡಿ ಹೋದ ರಾಜ್ಯ ಪರಿಸರ ಮಾಲಿನ್ಯ ಛೇರ್ಮನ್ ಶಾಂತತಿಮ್ಮಯ್ಯ
ಕೃಷ್ಣರಾಜಪೇಟೆ ತಾಲ್ಲೂಕಿನ ಕೋರಮಂಡಲ ಸಕ್ಕರೆ ಕಾರ್ಖಾನೆಯ ಇಂದ ಬರುವ ಹಾರು ಬೂದಿ ಇಂದ ರೈತರ ಬೆಳೆಗಳು ಪರಿಸರ ನಾಷವಾಗುತ್ತಿದೆ ಇದನ್ನು ಪರಿಶೀಲನೆ ಮಾಡುವಂತೆ ರಾಜ್ಯ ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಕಳೆದ ತಿಂಗಳ ಇಂದೆ ರೈತ ಸಂಘಟನೆಯು ದೂರು ಸಲ್ಲಿಕೆ ಮಾಡಿ, ಸ್ಥಳದಲ್ಲೇ ಪ್ರತಿಭಟನೆ ನೆಡಸಿದ ಹಿನ್ನಲೆ ಇಂದು ಪರಿಸರ ವಾಯು ಮಾಲಿನ್ಯ ಇಲಾಖೆಯ ಛೇರ್ಮನ್, ಮತ್ತು ಮಂಡ್ಯ ಜಿಲ್ಲಾ ಪರಿಸರ ಮಾಲಿನ್ಯ ಇಲಾಖೆಯ ಅಧಿಕಾರಗಳ ತಂಡವು ಇಂದು ಸಕ್ಕರೆ ಕಾರ್ಖಾನೆ ಬೇಟಿ ನೀಡಿದ್ರು. ಆದರೇ ಈ ಸಂದರ್ಭದಲ್ಲಿ ದೂರುದಾರಿಗೆ ಯಾವುದೇ ಮಾಹಿತಿ ನೀಡದೆ ಛೇರ್ಮೇನ್ ಮತ್ತು ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನೆಡೆಸಿ ಹೋಗವು ಸಂದರ್ಭದಲ್ಲಿ ದೂರುದಾರ ಮತ್ತು ರೈತ ಸಂಘಟನೆಯವರು ಸ್ಥಳದಲ್ಲೇ ಇದ್ದುದ್ದನ್ನು ನೋಡಿ ಕಾರಿನಿಂದ ಇಳಿದು ಬಂದು ಹಾರೈಕೆ ಉತ್ತರ ನೀಡಿದ್ದು, ಪರಿಸರ ಮಾಲಿನ್ಯ ಇಲಾಖೆಯ ಅಧಿಕಾರಗಳ ಉತ್ತರಕ್ಕೆ ರೈತ ಸಂಘಟನೆಯವರು ಒಪ್ಪದೇ ಇದ್ದಾಗಾ ಏಕಾ ಏಕಿ ಕಾರು ಚಾಲನೆ ಮಾಡಿಕೊಂಡು ಹೋಗುವ ಸಂದರ್ಭದಲ್ಲಿ ನಾನು ನೀಡಿರುವ ದೂರಿಗೆ ಸ್ಥಳದಲ್ಲೇ ಪರಿಯಾರ ಕಲ್ಪಿಸಿಕೊಡಬೇಕು ಎಂದು ಕಾರು ಮಂದೆ ರೈತ ಸಂಘಟನೆಯ ನೂರಾರು ಸದಸ್ಯರು ಪ್ರತಿಭಟನೆ ನೆಡೆಸಿಸ್ರು. ಇದನ್ನೇಲ್ಲಾ ಗಮನಿಸಿದ ಪರಿಸರ ಮಾಲಿನ್ಯ ಮತ್ತು ವಾಯು ಮಾಲಿನ್ಯ ಛೇರ್ಮೇನ್ ಶಾಂತತಿಮ್ಮಯ್ಯ, ಮತ್ತು ಅವರ ತಂಡ ಕಿಕ್ಕೇರಿ ಪೋಲಿಸರುನ್ನು ಕರೆರಸಿಕೊಂಡು ಹಿಂಬದಿ ಹಿಂದ ಪರಾರಿಯಾಗಿದ್ದಾರೆ ಎಂದು ರೈತ ಸಂಘಟನೆ ಮಾಜಿ ಜಿಲ್ಲಾದ್ಯಕ್ಷರಾದ ಮುದುಗೆರೆ ರಾಜೇಗೌಡ್ರು ತಿಳಿಸಿದ್ರು. ಈ ಸಂಧರ್ಭದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪುಟ್ಟೇಗೌಡ್ರು, ದೂರುದಾರ ಕರೋಠಿ ತಮ್ಮಯ್ಯ, ಪರಿಸರ ಮಾಲಿನ್ಯ ಹೋರಾಟಗಾರ ಮಾಕವಳ್ಳಿ ಯೋಗೇಶ್, ಅಕ್ಕಿಮಂಚನಹಳ್ಳಿ ನಾಗೇಗೌಡ್ರು, ಕೃಷ್ಣಾಪುರ ನಾರಾಯಣಸ್ವಾಮಿ, ಶೆಟ್ಟಹಳ್ಳಿ ಕೃಷ್ಣೇಗೌಡ ಸೇರಿದಂತೆ ನೂರಾರು ರೈ ಸಂಘದ ಕಾರ್ಯಕರ್ತರು ಇದ್ದರು.

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು
ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456
0 Comments