ಸಚಿವರಿಗೆ ಕಲಾಕೃತಿ ಉಡುಗೊರೆ
(ಸುದ್ದಿಕಿರಣ ವರದಿ)
ಉಡುಪಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಕ್ರಾಲಿಕ್ ಚಾರ್ಕೋಲ್ ಮಾಧ್ಯಮದಲ್ಲಿ ರಚಿಸಿದ ಕಲಾಕೃತಿಯನ್ನು ಮಣಿಪಾಲ ಚಿತ್ರ ಮತ್ತು ಮರಳುಶಿಲ್ಪ ಕಲಾವಿದ ಹರೀಶ್ ಸಾಗಾ ಉಡುಗೊರೆಯಾಗಿ ನೀಡಿದರು.
ಕಲಾವಿದ ಸಾಗಾ ಅವರೊಂದಿಗೆ ಕುಂದಾಪುರ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಕೆ. ಆರ್. ನಾಯ್ಕ್, ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆ ಅಧ್ಯಕ್ಷ ಎ. ನರಸಿಂಹ, ಕಾರ್ಯದರ್ಶಿ ಅಶೋಕ ಆಚಾರ್ಯ, ಸತ್ಯನಾರಾಯಣ ಹೆಬ್ಬಾರ್ ಬೀಜಾಡಿ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ಸಚಿವ ಕೋಟ ಅವರು ಕಲಾವಿದ ಸಾಗಾ ಅವರನ್ನು ಗೌರವಿಸಿದರು.