ಉಡುಪಿ ಛೇಂಬರ್ ಅಧ್ಯಕ್ಷರಾಗಿ ಅಂಡಾರು ದೇವಿಪ್ರಸಾದ ಶೆಟ್ಟಿ ಆಯ್ಕೆ
ಉಡುಪಿ, ನ. 25 (ಸುದ್ದಿಕಿರಣ ವರದಿ): ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಅಂಡಾರು ದೇವಿಪ್ರಸಾದ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಈಚೆಗೆ ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.
ಉಪಾಧ್ಯಕ್ಷರಾಗಿ ನಟರಾಜ್ ಪ್ರಭು, ಕಾರ್ಯದರ್ಶಿಯಾಗಿ ಡಾ. ವಿಜಯೇಂದ್ರ ವಸಂತ, ಜೊತೆ ಕಾರ್ಯದರ್ಶಿಗಳಾಗಿ ಲಕ್ಷ್ಮೀಕಾಂತ್ ಬೆಸ್ಕೂರ್ ಮತ್ತು ರಂಜಿತ್ ಪ್ರಭು, ಕೋಶಾಧಿಕಾರಿಯಾಗಿ ಅಮ್ಮುಂಜೆ ಪ್ರಭಾಕರ ನಾಯಕ್, ನಿರ್ದೇಶಕರಾಗಿ ಸುಭಾಷ್ ಕಾಮತ್, ಜಯಕರ ಶೆಟ್ಟಿ ಇಂದ್ರಾಳಿ, ಮುರಳೀಧರ ಬಾಳಿಗ, ವಿ. ಜಿ. ಶೆಟ್ಟಿ, ಚಿತ್ತರಂಜನ್ ಭಟ್, ವಾಲ್ಟರ್ ಸಾಲ್ಡಾನ, ಶುಭಾಷಿತ್ ಕುಮಾರ್ ಮತ್ತು ಚಂದ್ರಕಾಂತ್ ಆಯ್ಕೆಯಾಗಿದ್ದಾರೆ.