ಉಡುಪಿ: ಜಿಲ್ಲೆಗೆ ಗುರುವಾರ ರೈತ ಕಾರ್ಮಿಕ ಜಾಥಾ ಆಗಮಿಸಿದ್ದು ಸಾಲಿಗ್ರಾಮ, ಬ್ರಹ್ಮಾವರ, ಸಂತೆಕಟ್ಟೆ ಹಾಗೂ ಉಡುಪಿಯ ಕೆಲವೆಡೆ ಸಭೆ ನಡೆಸಲಾಯಿತು.
ಸಂಜೆ ನಗರದ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಬಹಿರಂಗ ಸಭೆ ನಡೆಸಲಾಯಿತು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಉದ್ಘಾಟಿಸಿದರು.
ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಪ್ರಮುಖರಾದ ವೆಂಕಟೇಶ ಕೋಣಿ, ಶಶಿಧರ ಗೊಲ್ಲ, ಶೇಖರ ಬಂಗೇರ, ಬಿಸಿಯೂಟ ನೌಕರರ ಸಂಘದ ಕಾರ್ಯದರ್ಶಿ ಕಮಲ, ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್., ಮೋಹನ, ವಾಮನ ಪೂಜಾರಿ, ದಯಾನಂದ ಕೋಟ್ಯಾನ್, ವಿದ್ಯಾ ರಾಜ್ ಮೊದಲಾದವರಿದ್ದರು