ಮಂಗಳೂರು: ಎಬಿವಿಪಿ ಮಂಗಳೂರು ಮಹಾನಗರ ವತಿಯಿಂದ ಸೋಮವಾರ ಕದ್ರಿ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ, ವಿದ್ಯಾರ್ಥಿ ಪರಿಷತ್ ಉತ್ತಮ ಸಂಸ್ಕಾರದೊಂದಿಗೆ ರಾಷ್ಟ್ರೀಯತೆ ಬೆಳೆಸುವ ಕೆಲಸ ಮಾಡುತ್ತಿದೆ. ದೇಶದ ಮುಂದಿನ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಭಾರತವನ್ನು ಪ್ರಪಂಚದಲ್ಲಿ ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವಲ್ಲಿ ಶ್ರಮ ವಹಿಸಬೇಕು. ಎಂದಿಗೂ ಕೂಡ ನಮ್ಮ ದೇಶದ ಯೋಧರ ಬಲಿದಾನವನ್ನು ಮರೆಯಬಾರದು ಎಂದರು.
ರಾಜ್ಯ ಸಹಕಾರ್ಯದರ್ಶಿ ಮಣಿಕಂಠ ಕಳಸ, ನಗರ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ನಗರ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ದೀಪ್ತಿ, ತಾಲೂಕು ಸಂಚಾಲಕ್ ನಿಶಾನ್ ಆಳ್ವ, ನಗರ ವಿದ್ಯಾರ್ಥಿನಿ ಪ್ರಮುಖ್ ಶ್ರೀಲಕ್ಷ್ಮಿ ಮಠದಮೂಲೆ, ಪ್ರಮುಖರಾದ ಆತ್ಮಿಕ, ಆದರ್ಶ, ಆದಿತ್ಯ ಶೆಟ್ಟಿ, ಶ್ರೀಪಾದ, ಪ್ರಸಿದ್ಧ, ಆದಿತ್ಯ ಕೆ. ಆರ್., ಸಂತೋಷ್ ಮೊದಲಾದವರಿದ್ದರು.