ಉಡುಪಿ: ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಕರಕಮಲಸಂಜಾತರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರೊಡಗೂಡಿ ಶುಕ್ರವಾರ ತಿರುಪತಿ ಶ್ರೀ ವೆಂಕಟೇಶ ದೇವಾಲಯಕ್ಕೆ ಭೇಟಿ ನೀಡಿದರು.
ದೇವಾಲಯದ ಹೆಚ್ಚುವರಿ ಸಿಇಓ ಧರ್ಮಾರೆಡ್ಡಿ ಅವರು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡು ದೇವರ ದರ್ಶನ ಮಾಡಿಸಿದರು.
ಶ್ರೀಗಳ ಆಪ್ತ ಕಾರ್ಯದರ್ಶಿ ಗಿರೀಶ ಉಪಾಧ್ಯಾಯ ಇದ್ದರು.