ಸುದ್ದಿಕಿರಣ ವರದಿ
ಮಂಗಳವಾರ, ಫೆಬ್ರವರಿ 15
ಉಡುಪಿ ಸುಲ್ತಾನ್ ಗೋಲ್ಡ್ ನಲ್ಲಿ ಡೈಮಂಡ್ ಪ್ರಿವೀವ್ ಉತ್ಸವಕ್ಕೆ ಚಾಲನೆ
ಉಡುಪಿ: ನಗರದ ವಿ.ಎಸ್.ಟಿ ರಸ್ತೆಯ ವೆಸ್ಟ್ ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಮ್ ನಲ್ಲಿ ಫೆ. 18ರ ವರೆಗೆ ಹಮ್ಮಿಕೊಳ್ಳಲಾದ ಡೈಮಂಡ್ ಪ್ರಿವೀವ್ ಉತ್ಸವವನ್ನು ಪೆನಿನ್ಸುಲಾ ಗ್ರಾಂಡ್ ಹೋಟೆಲ್ ಆಡಳಿತ ನಿರ್ದೇಶಕ ಹಾಗೂ ಚೇಯರ್ ಮೆನ್ ಕರುಣಾಕರ ಆರ್. ಶೆಟ್ಟಿ ರವಿವಾರ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಡೈಮಂಡ್ ಆಭರಣಗಳಾದ ತುರ್ಕಿಸ್ ಸಂಗ್ರಹವನ್ನು ವೈದ್ಯ ಡಾ. ಅನಂತ ಎಸ್. ಶೆಣೈ, ಮಿಡ್ಲ್ ಈಸ್ಟ್ ಸಂಗ್ರಹವನ್ನು ಉದ್ಯಮಿ ಎ. ಆರ್. ಬ್ಯಾರಿ, ಸೋಲಿಟೈರ್ ಸಂಗ್ರಹವನ್ನು ಸೂರಿ ಸೀ ಫುಡ ನ ಅಬ್ದುಲ್ ರಹಿಮಾನ್, ಬೆಲ್ಜಿಯಂ ಸಂಗ್ರಹವನ್ನು ಯಾಸ್ಮೀನ್ ಜೈರೋಝ್ ತೋಟ, ಫ್ರೆಂಚ್ ಸಂಗ್ರಹವನ್ನು ಕತಾರ್ ದೋಹಾ ಗೋಲ್ಡನ್ ಟ್ರೇಡಿಂಗ್ ಆ್ಯಂಡ್ ಡೆಕೋರೇಶನ್ ಆಡಳಿತ ನಿರ್ದೇಶಕ ಅಸ್ಮತ್ ಅಲಿ, ಯು. ಎಸ್. ಸಂಗ್ರಹವನ್ನು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ವೀಣಾ ಎಸ್. ಶೆಟ್ಟಿ, ಸುಲ್ತಾನ್ ಗೋಲ್ಡ್ ಉಡುಪಿ ನಗರದ ಹೆಗ್ಗುರುತಾಗಿದೆ. ಇಲ್ಲಿನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಚಿನ್ನಾಭರಣ ಒದಗಿಸುವಲ್ಲಿ ಹೆಸರುವಾಸಿಯಾಗಿದೆ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಶುಭ ಹಾರೈಸಿದರು.
ಸುಲ್ತಾನ್ ಗೋಲ್ಡ್ ಉಡುಪಿ ಬ್ರಾಂಚ್ ಮ್ಯಾನೇಜರ್ ಮುಹಮ್ಮದ್ ಅಜ್ಮಲ್ ವಂದಿಸಿದರು. ಆಯಿಸ್ಲೆ ಡಿ’ಸೋಜ ಸ್ವಾಗತಿಸಿ, ನಿರೂಪಿಸಿದರು. ಸುಲ್ತಾನ್ ಗ್ರೂಪ್ ನ ಉಡುಪಿ ಪ್ಲೋರ್ ಮ್ಯಾನೇಜರ್ ಸಿದ್ದಿಕ್ ಹಸನ್, ಅಸಿಸ್ಟೆಂಟ್ ಸೇಲ್ ಮ್ಯಾನೇಜರ್ ಗಳಾದ ಮುಹಮ್ಮದ್ ಶಾಮೀಲ್ ಅಬ್ದುಲ್ ಖಾದರ್, ನಝೀರ್ ಅದ್ದೂರು ಮೊದಲಾದವರಿದ್ದರು.