ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅರಸೀಕೆರೆ ಘಟಕದ ವತಿಯಿಂದ ಶತಾಬ್ದಿ ಪಥ ಸಂಚಲನ

ಅರಸಿಕೆರೆ ನಗರದಲ್ಲಿ ಆರ್.ಎಸ್.ಎಸ್ ವತಿಯಿಂದ ಶತಾಬ್ದಿ ಪಥ ಸಂಚಲನೆ ನಡೆಸಲಾಯಿತು. ಪಥ ಸಂಚಲನೆ ಹೊಗುವ ಮಾರ್ಗದಲ್ಲಿ ಎಲ್ಲಾ ಹಿಂದೂ ಬಾಂಧವರು ರಸ್ತೆಯಲ್ಲಿ ನೀರನ್ನು ಹಾಕಿ ರಂಗೋಲಿಯನ್ನು ಬಿಟ್ಟು ದ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ಕೋರಿದರು.
ಅಕ್ಕ ಪಕ್ಕದ ರಸ್ತೆ ಯವರು ಮತ್ತು ಅರಸೀಕೆರೆ ನಗರ, ಗ್ರಾಮಾಂತರ ಮತ್ತು ಬಾಣವಾರದ ಎಲ್ಲಾ ಹಿಂದೂ ಬಾಂಧವರು ಪಥ ಸಂಚಲನ ಚಲಿಸುವ ಮಾರ್ಗದಲ್ಲಿ ಪುಷ್ಪಾರ್ಚನೆ ಮಾಡಿದ್ದರು.
ಮಧ್ಯಾಹ್ನ ಶ್ರೀ ಕರಿಯಮ್ಮ ದೇವಸ್ಥಾನದಿಂದ ಆರಂಭಗೊಂಡು ಬಸವೇಶ್ವರನಗರದ. ಸಾಯಿನಾಥ ರಸ್ತೆ. ಪಿ ಪಿ ವೃತ್ತ. ಬಿ ಹೆಚ್ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತ ಗಣಪತಿ ಪೆಂಡಾಲ್. ಪೇಟೆ ಬೀದಿ ನಗರದ ಮುಖ್ಯ ರಸ್ತೆಯಲ್ಲಿ ಪಥಸಂಚಾಲನ ಮಾಡುವ ಮೂಲಕ ಶ್ರೀ ಕೋಡಿಮಠ ಕಾಲೇಜಿಗೆ ಪ್ರವೇಶಸಲಾಯಿತ್ತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
What's Your Reaction?






