ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಸೇತುವೆ

ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಸೇತುವೆ

ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಸೇತುವೆ

ಮಳವಳ್ಳಿ ತಾಲೂಕು ಹಲಗೂರು ಹೋಬಳಿ ಪ್ರವಾಸಿ ತಾಣವಾದ ಮುತ್ತತ್ತಿ ರಸ್ತೆಯಲ್ಲಿರುವ ಸೇತುವೆ ಕುಸಿದು ಬಿದ್ದು ಅಪಘಾತಕ್ಕೆ ಆಹ್ವಾನ ನೀಡುವಂತೆ ಕಾಣುತ್ತಿದೆ. ಮುತ್ತತ್ತಿಯಲ್ಲಿರುವ ಭಿಮೇಶ್ವರಿ ಫಿಶಿಂಗ್ ಕ್ಯಾಂಪ್ ಮುಂದೆ ಒಂದು ಕಿಲೋಮೀಟರ್ ದೂರದಲ್ಲಿ ಸೇತುವೆ  ಕುಸಿದು ಬಿದ್ದಿದ್ದು ಸುಮಾರು ವರ್ಷಗಳಾದರೂ ಸಹ ಯಾವುದೇ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ . ಮಾಧ್ಯಮದ ಮುಖಾಂತರ ತಿಳಿಸುವುದೇನೆಂದರೆ ರಾಜ್ಯದ ಹಲವು ಹಲವಾರು ಭಾಗಗಳಿಂದ ಮುತ್ತತ್ತಿ ಆಂಜನೇಯ ಸ್ವಾಮಿಯ ದರ್ಶನಕ್ಕೆ ಬರುವ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ತಿರುಗಾಡುತ್ತವೆ ಇದೇ ಸ್ಥಳದಲ್ಲಿ ಬೈಕ್ ಸವಾರರು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಕೆಲವರಿಗೆ ಸಣ್ಣಪುಟ್ಟ ಗಾಯಗಳು ಸಹ ಆಗಿವೆ. ಪಿಡಬ್ಲ್ಯೂಡಿ ಅಥವಾ ಸಂಬಂಧ ಪಟ್ಟ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಈ ಸೇತುವೆಯನ್ನು ಸರಿಪಡಿಸಬೇಕಾಗಿ ಮಾಧ್ಯಮದ ಮುಖಾಂತರ ಕೇಳುತ್ತೇವೆ ಎಂದು ಸಾಗ್ಯ ಕೆಂಪಣ್ಣ ತಿಳಿಸಿದರು. ಇದೇ ಸಂದರ್ಭದಲ್ಲಿ ಸಿದ್ದಪ್ಪ, ಶಿವಮುದ್ದಯ್ಯ, ಸಿದ್ದ ರಾಮು, ಹಾಜರಿದ್ದರು.