"ವೇಣುನಾದ ವೈಭವ"

"ವೇಣುನಾದ ವೈಭವ"

"ವೇಣುನಾದ ವೈಭವ"

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಫೆಬ್ರವರಿ ‌1, ಗುರುವಾರ ಸಂಜೆ 7-30ಕ್ಕೆ ವಿ|| ಅಮಿತ್ ನಾಡಿಗ್ ಇವರ ಶಿಷ್ಯರಾದ ಚಿ|| ತೇಜಸ್ ರಾಜೇಶ್ ಮತ್ತು ಚಿ|| ಸಮರ್ಥ್ ಚಂದ್ರ ಭಾರಧ್ವಾಜ್ ಇವರಿಂದ "ವೇಣು ವಾದನ". ವಿ|| ರವಿಶಂಕರ್ ಶರ್ಮಾರವರ ಶಿಷ್ಯ ಚಿ|| ಭರತ್ ಚಂದ್ರ ಭಾರಧ್ವಾಜ್ (ಮೃದಂಗ), ವಿ|| ಶ್ರೀಮತಿ ಸುಕನ್ಯಾ ರಾಮಗೋಪಾಲ್  ಶಿಷ್ಯ ಚಿ|| ಸ್ಕಂದ ಮಂಜುನಾಥ್ (ಘಟ).  ಈ ಯುವ ಪ್ರತಿಭೆಗಳಿಂದ ಕಾರ್ಯಕ್ರಮ ಏರ್ಪಡಿಸಿದೆ ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.