ಸಂಭ್ರಮ್ ಸಮೋಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ದಿನಾಚರಣೆ

ದಿನಾಂಕ 9ನೇ ಸೆಪ್ಟೆಂಬರ್ 2025 ರಂದು ಸಂಭ್ರಮ್ ಸಮೋಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ದಿನಾಚರಣೆಯನ್ನು ಆಚರಿಸಲಾಯಿತು.
ಈ ದಿನ ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಶ್ರೀ ಆರ್ ವೆಂಕಟೇಶ್ ಅವರು ಸಂಸ್ಥೆ ಸ್ಥಾಪಿಸಲು ಅವರ ಸಾಧನೆ ಹಾಗೂ ಕೊಡುಗೆಯನ್ನು ನೆನಸಿಕೊಂಡು ಅವರ ಹೆಸರಿನಲ್ಲಿ ವಿವಿದ ಸೇವಾ ಕಾರ್ಯಕ್ರಮ ಆಯೋಜಿಸಲಾಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಛೇರ್ಮನ್ ಹಾಗೂ ಅವರ ಸುಪುತ್ರರು ಆದ ಶ್ರೀ ವಿ ನಾಗರಾಜು ರವರು ಒಂದು ಸಂಸ್ಥೆ ಎಶಸ್ವಿಯಾಗಿ ಮುಂದೆ ಕೊಂಡೊಯಲು ಸಂಸ್ಥಾಪಕರ ದೂರದೃಷ್ಟಿ ಹಾಗೂ ಸ್ಪಷ್ಟ ಉದ್ದೇಶದ ಹರಿವಿನ ತಿಳುವಳಿಕೆ ಬಹಳ ಮುಖ್ಯ ಆ ದಾರಿಯಲ್ಲೇ ನಾನು ಸಾಗುತಿದ್ದೇನೆ ಎಂದು ಭಾವಿಸುತ್ತೆನೆ. ಇದೆ ಸಂದರ್ಭದಲ್ಲಿ ಉಚಿತ ಅರೋಗ್ಯ ಶಿಬಿರವನ್ನು ಏರ್ಪಡಿಸಿಲಾಗಿತ್ತು. ಶಿಬಿರದಲ್ಲಿ ಮಣಿಪಾಲ್ ಆಸ್ಪತ್ರೆ ವತಿಯಿಂದ ಹೃದಯ ಸಂಬಂದಿ ತಪಾಸಣೆ, ನಾಯೋನಿಕ ಐ ಕೇರ್ ವತಿಯಿಂದ ಕಣ್ಣಿನ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆ, ಲಯನ್ಸ್ ಕ್ಲಬ್ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಬಿ ಪಿ ಹಾಗೂ ರಕ್ತ ಒತ್ತಡ, ಮತ್ತು ಇತರ ತಪಾಸಣೆ ನಡೆಸಲಾಯಿತು. ಎಲ್ಲರಿಗೂ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
What's Your Reaction?






