ಪಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ವನಸಿರಿ ಫೌಂಡೇಶನ್ ಸಸಿನೆಡುವ ಕಾರ್ಯ ಶ್ಲಾಘನೀಯ-ಬಿ.ಎಸ್.ತಳವಾರ (DYSP)

ಪಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ವನಸಿರಿ ಫೌಂಡೇಶನ್ ಸಸಿನೆಡುವ ಕಾರ್ಯ ಶ್ಲಾಘನೀಯ-ಬಿ.ಎಸ್.ತಳವಾರ (DYSP)

ಪಲ್ವಾಮಾ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ವನಸಿರಿ ಫೌಂಡೇಶನ್ ಸಸಿನೆಡುವ ಕಾರ್ಯ ಶ್ಲಾಘನೀಯ-ಬಿ.ಎಸ್.ತಳವಾರ (DYSP)

ಸಿಂಧನೂರು ನಗರದ ಪಿ ಡಬ್ಲ್ಯೂ ಡಿ ಕ್ಯಾಂಪ್ ನ ಸಂಚಾರಿ ಪೋಲಿಸ್ ಠಾಣೆಯ ಆವರಣದಲ್ಲಿ ಸಂಚಾರಿ ಪೊಲೀಸ್ ಇಲಾಖೆ ಹಾಗೂ ವನಸಿರಿ ಫೌಂಡೇಶನ್ ಸಹಯೋಗದೊಂದಿಗೆ ಹುತಾತ್ಮ ಯೋಧರ ಸ್ಮರಣಾರ್ಥವಾಗಿ  ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ DYSP ಬಾಳಪ್ಪ ಆದಪ್ಪ ತಳವಾರ(BS ತಳವಾರ) ಅವರು ಸಸಿ ನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.ಈ ಕಹಿ ಘಟನೆ ಎಲ್ಲ ಭಾರತೀಯರಿಗೆ ನೋವುಂಟು ಮಾಡಿತು.ಇಂತಹ ಒಂದು ಯುದ್ಧದಲ್ಲಿ ವೀರಮರಣ ಹೊಂದಿದ ಹುತಾತ್ಮ ಯೋಧರ ಸವಿನೆನಪು ಸದಾಕಾಲ ನಮ್ಮ ಜೊತೆಗೆ ಇರಲಿ,ಅವರ ಆದರ್ಶಗಳನ್ನು ನಾವುಗಳೆಲ್ಲರೂ ಮೈಗೂಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಇಂದು ಸಂಚಾರಿ ಪೋಲಿಸ್ ಠಾಣೆಯ ಆವರಣದಲ್ಲಿ ಹಲವಾರು ಸಸಿಗಳನ್ನು ನೆಟ್ಟು ನೀರುಣಿಸುವ ಮೂಲಕ ಸಸಿ ನೆಡುವ ಕಾರ್ಯಕ್ರಮವನ್ನು ವನಸಿರಿ ಫೌಂಡೇಶನ್ ತಂಡ ಹಾಗೂ ನಮ್ಮ ಸಿಬ್ಬಂದಿಗಳು ಹಮ್ಮಿಕೊಂಡಿರುವುದು ಶ್ಲಾಘನೀಯ ಇಂತಹ ಕಾರ್ಯಗಳು ಇನ್ನೂ ಹೆಚ್ಚು ಹೆಚ್ಚು ನಡೆಯಲಿ,ಹುತಾತ್ಮರ  ಸವಿನೆನಪು ಉಳಿಯುವ ಜೊತೆ ಜೊತೆಗೆ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಶುದ್ಧ ಗಾಳಿ ದೊರೆಯುವಂತಾಗಲು ಪರಿಸರವನ್ನು ಉಳಿಸಲು ಮುಂದಾಗೋಣ ಎಂದರು. ಇದೇ ಸಂದರ್ಭದಲ್ಲಿ ವಿವಿಧ ರೀತಿಯ ತಳಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಸಿಗಳನ್ನು ನೆಟ್ಟು ನೀರುಣಿಸಲಾಯಿತು.