ಶ್ರೀರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಪ್ರಸಾದ ವಿತರಣೆ ಕಾರ್ಯಕ್ರಮ

ಶ್ರೀರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಪ್ರಸಾದ ವಿತರಣೆ ಕಾರ್ಯಕ್ರಮ

ಶ್ರೀರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಪ್ರಸಾದ ವಿತರಣೆ ಕಾರ್ಯಕ್ರಮ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದ ವೀರಶೈವ ಸಮಾಜದ ವತಿಯಿಂದ ಹಾಗೂ ಗ್ರಾಮಸ್ಥರ ವತಿಯಿಂದ ಶ್ರೀ ರಾಮನ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ. ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಗ್ರಾಮಸ್ಥರಾದ ಸಿದ್ದಲಿಂಗ ಸ್ವಾಮಿ ಮಾತನಾಡಿ. ಹರೇ ಕೃಷ್ಣ, ಹರೇ ಕೃಷ್ಣ, ಹರೆ ರಾಮ ಅರೆರಾಮ ಹರೇ ರಾಮ ಶ್ಲೋಕವನ್ನು ಹೇಳುತ್ತಾ ನಮ್ಮ ದಳವಾಯಿ ಕೋಡಿಹಳ್ಳಿ ಗ್ರಾಮದ ವೀರಶೈವ ಸಮಾಜದ ವತಿಯಿಂದ ಗ್ರಾಮಸ್ಥರೆಲ್ಲರೂ ಕೂಡಿ ಇಂದು ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದ ನೀಡಿದ್ದೇವೆ. ಮೋದಿಜಿಯವರ ಈ ಕಾಲಘಟ್ಟದಲ್ಲಿ ಶ್ರೀರಾಮನ ಅಯೋದ್ಯ ಮಂದಿರದ ಉದ್ಘಾಟನೆಯಲ್ಲಿ  ನಾವು ಪಾಲ್ಗೊಂಡಿರುವುದು ಜೀವನ ಪಾವನ ವಾದಂತೆ. ಶ್ರೀ ರಾಮ ಮಂದಿರ ಸ್ಥಾಪನೆ ಆಗಬೇಕು ಅಂತ ಅನ್ನೋದು ನಮ್ಮ 500 ವರ್ಷಗಳ ಕನಸು ಇಂದು ನನಸಾಗ್ತಿರೋದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಶ್ರೀರಾಮ ಒಬ್ಬ ವ್ಯಕ್ತಿಯಲ್ಲ ಒಬ್ಬ ಆದರ್ಶ ಪುರುಷ ನಮ್ಮ ಯುವಪೀಳಿಗೆಗೆ ಶ್ರೀ ರಾಮನ ಜೀವನದಿಂದ ಅಳವಡಿಸಿಕೊಳ್ಳಬೇಕು ಅಂತ ಹಲವಾರು  ಮಾರ್ಗದರ್ಶನಗಳಿವೆ ಎಂದರು. ಇದೆ ಸಂದರ್ಭದಲ್ಲಿ ವೀರಶೈವದ ಸಮಾಜದ ಮುಖಂಡರು ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.