ಸುದ್ದಿ ಕಿರಣ ಪತ್ರಿಕೆ ಬರಹಗಾರ ಡಾ. ಶಿಲಾಸೂಗೆ "ಜಾಗೃತಿ ಶ್ರೀ" ರಾಜ್ಯ ಪ್ರಶಸ್ತಿ.

ಸುದ್ದಿ ಕಿರಣ ಪತ್ರಿಕೆ ಬರಹಗಾರ ಡಾ. ಶಿಲಾಸೂಗೆ "ಜಾಗೃತಿ ಶ್ರೀ" ರಾಜ್ಯ ಪ್ರಶಸ್ತಿ.

ಜನರಲ್ಲಿ ಮತದಾನದ ಜಾಗೃತಿ ಮೂಡಿಸುವ ಉದ್ದೇಶದಿಂದ ಕವಿವಾಣಿ ಸಾಹಿತ್ಯ ಪರಿಷತ್ತು, ರಾಜ್ಯ ಘಟಕ, ಕರ್ನಾಟಕ ವತಿಯಿಂದ ಹಮ್ಮಿಕೊಂಡಿರುವ ಮತದಾನ ಜಾಗೃತಿ ಗೀತೆ ರಚನೆ ಸ್ಪರ್ಧೆಯಲ್ಲಿ ಡಾ.ಶಿವಕುಮಾರ. ಲಾ.ಸೂರ್ಯವಂಶ, ಕಲಬುರಗಿ ರವರು ರಚಿಸಿರುವ ಮತದಾನ ಜಾಗೃತಿ ಗೀತೆಗೆ ತೃತೀಯ ಸ್ಥಾನ ನೀಡಿ ರಾಜ್ಯ ಮಟ್ಟದ "ಜಾಗೃತಿ ಶ್ರೀ" ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಕವಿವಾಣಿ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ, ಕೆ.ಎನ್.ಅಕ್ರಂಪಾಷ ರವರು ತಿಳಿಸಿದ್ದಾರೆ. ರಾಜ್ಯಮಟ್ಟದ ಸ್ವರಚಿತ ಕವನ ಸ್ಪರ್ಧೆಗೆ ಬಂದ ಕವಿತೆಗಳನ್ನು ಕವಿವಾಣಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮತ್ತು ಶಿಕ್ಷ‌ಕ ಮತ್ತು ಸಾಹಿತಿಗಳಾದ ಶ್ರೀ, ಕೆ.ಎನ್.ಅಕ್ರಂಪಾಷ ಹಾಗೂ ಸಾಹಿತಿಯವರಾದ ಶ್ರೀ,ಬಸವರಾಜ ಬಲಗುಂದಿ ರವರು ಪರಿಶೀಲಿಸಿ ತೀರ್ಪು ನೀಡಿದ್ದಾರೆ.