ಶ್ರೀ ವಿನಾಯಕನ ಸನ್ನಿಧಿಯಲ್ಲಿ ಅನನ್ಯ ಬೆಳವಾಡಿ ಗಾಯನ ಸೇವೆ

ಶ್ರೀ ವಿನಾಯಕನ ಸನ್ನಿಧಿಯಲ್ಲಿ ಅನನ್ಯ ಬೆಳವಾಡಿ ಗಾಯನ ಸೇವೆ

ಬೆಂಗಳೂರಿನ ಪ್ರಶಾಂತನಗರದಲ್ಲಿರುವ ಶ್ರೀ ಪ್ರಶಾಂತ ಗಣಪತಿ ದೇವಸ್ಥಾನದಲ್ಲಿ ಏಪ್ರಿಲ್ 19ರಂದು ಏರ್ಪಡಿಸಿದ್ದ "ಹರಿದಾಸ ವೈಭವ" ಕಾರ್ಯಕ್ರಮದಲ್ಲಿ ಕು||ಅನನ್ಯ ಬೆಳವಾಡಿ ಅವರು ಅಪರೋಕ್ಷ ಜ್ಞಾನಿಗಳಿಂದ ರಚಿತವಾದ ಹಲವಾರು ಅಪರೂಪದ ಹರಿದಾಸರ ಕೃತಿಗಳನ್ನೂ ಹಾಗೂ ಶ್ರೀ ಅನ್ನಮಾಚಾರ್ಯರ ಮತ್ತು ಶ್ರೀ ತ್ಯಾಗರಾಜರ ಕೀರ್ತನೆಗಳನ್ನೂ ಪ್ರಸ್ತುತ ಪಡಿಸಿದರು. ಇವರ ಗಾಯನಕ್ಕೆ ಕೀಬೋರ್ಡ್ ವಾದನದಲ್ಲಿ ಶ್ರೀ ಅಮಿತ್ ಶರ್ಮಾ, ತಬಲಾ ವಾದನದಲ್ಲಿ ಶ್ರೀ ಸರ್ವೋತ್ತಮ ಸಾಥ್ ನೀಡಿದರು. ದೇವಸ್ಥಾನದ ಕಮಿಟಿಯ ಶ್ರೀ ಸೇತುರಾಮನ್ ಸ್ವಾಗತಿಸಿದರು.ಹಿರಿಯ ಮುತ್ಸದ್ದಿ ಶ್ರೀ ಗಣೇಶ್ ಭಟ್ ಕಲಾವಿದರನ್ನು ಸನ್ಮಾನಿಸಿದರು. ಶ್ರೀ ಗುರುರಾಜ್ ವಂದನಾರ್ಪಣೆ ಮಾಡಿದರು.