ಬಾಗೇಪಲ್ಲಿ ಕ್ಷೇತ್ರಕ್ಕೆ ಇಂದಿರಾ ಕ್ಯಾಂಟೀನ್ ಭಾಗ್ಯ-ಭೂಮಿ ಪೂಜೆ ನೆರವೇರಿಸಿದ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ
ಬಾಗೇಪಲ್ಲಿ ಕ್ಷೇತ್ರಕ್ಕೆ ಇಂದಿರಾ ಕ್ಯಾಂಟೀನ್ ಭಾಗ್ಯ-ಭೂಮಿ ಪೂಜೆ ನೆರವೇರಿಸಿದ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ
ಬಾಗೇಪಲ್ಲಿ ಪಟ್ಟಣಕ್ಕೆ ಈ ಹಿಂದೆಯೇ ಕ್ಯಾಂಟೀನ್ ಕಟ್ಟಲು ಅನುಮೋದನೆ ದೊರಕಿತ್ತು ಆದರೆ ಸರಿಯಾದ ಸ್ಥಳ ಪಟ್ಟಣದಲ್ಲಿ ದೊರಯಲಿಲ್ಲಾ. ಇದರಿಂದ ಇಷ್ಟು ತಡವಾಗಲು ಕಾರಣವಾಗಿದೆ ಎಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ತಿಳಿಸಿದ್ದಾರೆ. ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ತಹಸೀಲ್ದಾರ್ ವಸತಿ ಗೃಹದ ಮುಂಭಾಗದಲ್ಲಿ ಶಾಸಕರಿಂದ ಕ್ಯಾಂಟೀನ್ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಯಿತು. ಬಳಿಕ ಮಾತನಾಡಿದ ಅವರು ಬಾಗೇಪಲ್ಲಿ ಪಟ್ಟಣಕ್ಕೆ ಈ ಹಿಂದೆಯೇ ಕ್ಯಾಂಟೀನ್ ಕಟ್ಟಲು ಅನುಮೋದನೆ ದೊರಕಿತ್ತು.ಆದರೆ ಸರಿಯಾದ ಸ್ಥಳ ಪಟ್ಟಣದಲ್ಲಿ ದೊರಯಲಿಲ್ಲಾ. ಇದರಿಂದ ಇಷ್ಟು ತಡವಾಗಲು ಕಾರಣ. ಕೊನೆಗೂ ತಹಶೀಲ್ದಾರ್ ಗೃಹ ಕಚೇರಿ ಮುಂಭಾಗ ಸ್ಥಳ ನಿಗದಿ ಮಾಡಿ ಕ್ಯಾಂಟೀನ್ ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡಲಾಗಿದೆ ಎಂದರು. ಅತೀ ಶೀಘ್ರ ಕಟ್ಟಡ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ತಿಳಿಸಿದ್ದೇನೆ. ಆದಷ್ಟು ಬೇಗ ಅಂದರೆ ಮುಂದಿನ ತಿಂಗಳು ಹದಿನಾಲ್ಕುನೇ ತಾರೀಖು ಇಂದರಾ ಕ್ಯಾಂಟೀನ್ ತೆರೆದು ಬಡವರ ಹಸಿವು ನೀಗಿಸಲು ಅನುಕೂಲ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ತಹಸೀಲ್ದಾರ್ ಪ್ರಶಾಂತ್ ಕೆ. ಪಾಟೀಲ್, ಪುರಸಭೆ ಮುಖ್ಯಧಿಕಾರಿ ರುದ್ರಮ್ಮ ಶರಣಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ರಮೇಶ್, ಪುರಸಭೆ ಸದಸ್ಯ ಗಡ್ಡಮ್ ರಮೇಶ್,ಮುಖಂಡರಾದ ಎ. ವಿ.ಪೂಜಪ್ಪ,ಗುಂಟಿಗಾನಪಲ್ಲಿ ಮಂಜುನಾಥರೆಡ್ಡಿ,ಇದ್ದರು.