ಹೆಚ್.ಎಸ್.ಶ್ರೀಕಂಠಯ್ಯನವರ ನನ್ನೊಳಗಿನ ನಾನು ಎಂಬ ಆತ್ಮ ಕಥೆ ಕೃತಿ ಬಿಡುಗಡೆ ಸಮಾರಂಭ

ಹೆಚ್.ಎಸ್.ಶ್ರೀಕಂಠಯ್ಯನವರ ನನ್ನೊಳಗಿನ ನಾನು ಎಂಬ ಆತ್ಮ ಕಥೆ ಕೃತಿ ಬಿಡುಗಡೆ ಸಮಾರಂಭ

ಹೆಚ್.ಎಸ್.ಶ್ರೀಕಂಠಯ್ಯನವರ ನನ್ನೊಳಗಿನ ನಾನು ಎಂಬ ಆತ್ಮ ಕಥೆ ಕೃತಿ ಬಿಡುಗಡೆ ಸಮಾರಂಭ

ಚನ್ನರಾಯಪಟ್ಟಣ: ಜ.28ರಂದು ಹೆಚ್.ಎಸ್.ಶ್ರೀಕಂಠಯ್ಯನವರ ನನ್ನೊಳಗಿನ ನಾನು ಎಂಬ ಆತ್ಮ ಕಥೆ ಕೃತಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಅಣತಿ ಆನಂದ್ ತಿಳಿಸಿದರು. ಅವರು ಪಟ್ಟಣದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ತಾಲೂಕಿನ ಹಿರಿಯ ರಾಜಕಾರಣಿ ಹಾಗೂ ವಿಚಾರವಂತರಾದ ಶ್ರೀಕಂಠಯ್ಯನವರು ತಮ್ಮ ಆತ್ಮಕತೆಯನ್ನು ಪುಸ್ತಕ ರೂಪದಲ್ಲಿ ಹೊರತರುತ್ತಿದ್ದು ಅವರ ಜೀವನದಲ್ಲಿ ನಡೆದ ಸಿಹಿ ಕಹಿ ಘಟನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಎಷ್ಟೋ ಜನರಿಗೆ ಅವರ ಜೀವನ ಮಾರ್ಗದರ್ಶನವಾಗಿದ್ದು ಅದರಲ್ಲಿ ನಾನೂ ಒಬ್ಬ. ಅವರ ನಿಷ್ಠಾವಂತ ಸೇವೆ ಹಾಗೂ ಸಾಧನೆಗಳನ್ನು ಪುಸ್ತಕದಲ್ಲಿ ತೆರೆದಿಟ್ಟಿದ್ದು ನವೋದಯ ವಿದ್ಯಾ ಸಂಸ್ಥೆ, ಹೇಮಾವತಿ ಸಕ್ಕರೆ ಕಾರ್ಖಾನೆ, ಪಿಎಲ್‌ಡಿ ಬ್ಯಾಂಕ್‌ಗಳಲ್ಲಿ ಸೇವೆ ಸಲ್ಲಿಸಿದನ್ನು ಮೆಲುಕು ಹಾಕಲಾಗಿದೆ ಆದ್ದರಿಂದ ಪಟ್ಟಣದ ನವೋದಯ ವಿದ್ಯಾ ಸಂಸ್ಥೆ ಆವರಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ತಾಲೂಕಿನ ಸಾಹಿತಿಗಳು, ಸ್ನೇಹಿತರು, ಹಿತೈಶಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಕೃತಿ ಬಿಡುಗಡೆ ಸಮಾರಂಭವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಹಿತಿ ಪ್ರೋ.ಸಿದ್ದೇಗೌಡ, ಹೆಚ್. ಎಸ್. ಶ್ರೀಕಂಠಯ್ಯ ಇದ್ದರು.