ವಿದ್ಯುತ್ ವಿತರಣಾ ಜಾಲ ಖಾಸಗಿ ಪಾಲಾಗದಿರಲಿ-ರಾಜ್ಯ ಅಧಿಕ ಕಾರ್ಯದರ್ಶಿ ಎನ್.ಸುಕುಮಾರ್
ಭಾಗ್ಯನಗರ: ವಿದ್ಯುತ್ ಸರಬರಾಜು ಮಾಡುವ ವಿತರಣಾ ಜಾಲದ ಖಾಸಗೀಕರಣ ನಿರ್ಧಾರ ಕೈಬಿಟ್ಟು ಟಾಟಾ ಪವರ್ ಸಂಸ್ಥೆಯ ಅರ್ಜಿಯನ್ನು ತಿರಸ್ಕರಿಸಬೇಕು. ಕೆಪಿಟಿಸಿಎಲ್ ಹಾಗೂ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆಗೆ ಟಾಟಾ ಪವರ್ ಕಂಪನಿ ಪರವಾನಗಿ ಪಡೆಯುತ್ತಿರುವುದು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ವ್ಯವಸ್ಥಿತ ಸಂಚು ಇದಾಗಿದೆ ಎಂದು ಕೆ ಪಿ ಟಿ ಸಿ ಎಲ್ ನೌಕರರ ಸಂಘ ಮತ್ತು ಎಸ್ಕಾಮ್ಸ್ ಅಧಿಕ ಕಾರ್ಯದರ್ಶಿ ಎನ್.ಸುಕುಮಾರ್ ತಿಳಿಸಿದರು.
ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ವಿದ್ಯುತ್ ಖಾಸಗಿ ಕಾರಣ ಮಾಡಿ (ಟಾಟಾ ಪವರ್ ಲಿಮಿಟ್) ಕಂಪನಿಗೆ ನೀಡುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ರೂಪಿಸಲು ನಡೆದ ಪೂರ್ವ ಭವಿಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆ ಪಿ ಟಿ ಸಿ ಎಲ್ ನೌಕರರ ಸಂಘ ಮತ್ತು ಎಸ್ಕಾಮ್ಸ್ ಅಧಿಕ ಕಾರ್ಯದರ್ಶಿ ಎನ್. ಸುಕುಮಾರ್,ಸರ್ಕಾರ ರಾಜ್ಯದ ವಿದ್ಯುತ್ ವಿತರಣಾ ವಲಯವನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯಲು ಹೊರಟಿದೆ. ರಾಜ್ಯದ ಜನತೆಯ ಆಸ್ತಿಯಾಗಿರುವ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವುದು ಅಪಾಯಕಾರಿ ನಡೆ. ಸರ್ಕಾರದ ಈ ಕ್ರಮ ನೌಕರರ ವಿರೋಧಿಯಷ್ಟೆ ಅಲ್ಲದೆ, ರಾಜ್ಯದ ಗ್ರಾಹಕರ ಹಿತಾಸಕ್ತಿಗೆ ಮಾರಕವಾಗಿದೆ. ರೈತರಿಗೆ ಸರ್ಕಾರ ಹಲವು ಯೋಜನೆಯಡಿ ಉಚಿತವಾಗಿವಿದ್ಯುತ್ ನೀಡುತ್ತಿದೆ. ಅಂತಹವರಿಗೆ ತೊಂದರೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ರಾಜ್ಯದ ಎಲ್ಲ ಎಸ್ಕಾಂಗಳು ಈಗಾಗಲೇ ನುರಿತ ಸಿಬ್ಬಂದಿ, ಸಾವಿರಾರು ಕೋಟಿ ರೂ. ಮೌಲ್ಯದ ವಿದ್ಯುತ್ ವಿತರಣಾ ಜಾಲ, ಉಪಕೇಂದ್ರಗಳು ಹಾಗೂ ಯಂತ್ರೋಪಕರಣಗಳ ಬೃಹತ್ ಮೂಲಸೌಕರ್ಯ ಹೊಂದಿವೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾದ ಈ ಬೃಹತ್ ವ್ಯವಸ್ಥೆಯನ್ನು ಲಾಭದಾಸೆಗೆ ಹೊರ ರಾಜ್ಯದ ಖಾಸಗಿ ಸಂಸ್ಥೆಗೆ ವಹಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ರೈತ ಸಂಘಟನೆ ಜಿಲ್ಲಾ ಸಂಚಾಲಕ ಪಿ. ಮಂಜುನಾಥ್ ರೆಡ್ಡಿ ಮಾತನಾಡಿ, ಇಂಧನ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿರುವುದರಿಂದ ಮುಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ತೊಂದರೆಯಾಗಲಿದೆ. ಒಕ್ಕೂಟವು ರಾಜ್ಯದ ಎಲ್ಲ ವರ್ಗದ ಗ್ರಾಹಕರ ಮತ್ತು ಎಸ್ಕಾಂಗಳ ನೌಕರರ ಹಿತ ಕಾಯಲು ಬದ್ಧವಾಗಿದೆ. ರಾಜ್ಯದಲ್ಲಿ ಅದ್ಭುತ ತಾಂತ್ರಿಕ ಸಾಮರ್ಥ್ಯ, ಮೂಲಸೌಕರ್ಯ ಮತ್ತು ಸುಗಮ ಆಡಳಿತ ನಿರ್ವಹಣೆ ಇರುವಾಗ ರಾಜ್ಯದ ವಿದ್ಯುತ್ ವಿತರಣಾ ಜಾಲವನ್ನು ಹೊರ ರಾಜ್ಯದ ಖಾಸಗಿ ಸಂಸ್ಥೆಗೆ ಹಸ್ತಾಂತರಿಸಲು ಬಿಡುವುದಿಲ್ಲ ಹಾಗೂ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಮಾಡಲು ಟಾಟಾ ಪವರ್ ಕಂಪನಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿರುವುದನ್ನು ಖಂಡಿಸಿ ನಡೆಸುವ ಹೋರಾಟಕ್ಕೆ ನಮ್ಮ ಅಖಿಲ ಕರ್ನಾಟಕ ರೈತ ಸಂಘಟನೆ ಸದಾ ಕೈ ಜೋಡಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಟಿ. ಸತ್ಯನಾರಾಯಣರೆಡ್ಡಿ, ಬೆಸ್ಕಾಂ ಸಹಾಯಕ ಅಭಿಯಂತರ ಸೋಮು ಶೇಖರ್, ವಿವಿಧ ಸಂಘಟನೆಗಳ ಮುಖಂಡರಾದ ಶ್ರೀರಾಮನಾಯ್ಕ್,ಕೆ.ಜಿ.ವೆಂಕಟರವಣ, ಜಿ ಜೆ ಹಳ್ಳಿ ನಾರಾಯಣ ಸ್ವಾಮಿ,ಗಡ್ಡಮ್ ಸೋಮು, ಲಕ್ಷ್ಮನಾರಾಯಣರೆಡ್ಡಿ,ಗೋವಿಂದ ರೆಡ್ಡಿ, ಶ್ರೀನಿವಾಸ್, ನಿರ್ಮಲಮ್ಮ ರಘುರಾಮ ರೆಡ್ಡಿ, ಈಶ್ವರ್ ರೆಡ್ಡಿ,
ಚನ್ನರಾಯಪ್ಪ, ಗುಂಟಿ ಗಾನ ಪಲ್ಲಿ ಮಂಜುನಾಥ್ ರೆಡ್ಡಿ, ಸತ್ಯ ನಾರಾಯಣ ರೆಡ್ಡಿ,ಸೋಮು ಶೇಖರ್,ಸುಕುಮಾರ್, ರಮೇಶ್,ರವಿ, ಕೊತ್ತಪಲ್ಲಿ ನಾರಾಯಣ ಸ್ವಾಮಿ, ಸೇರಿದಂತೆ ಮತ್ತಿತರರು ಇದ್ದರು....
What's Your Reaction?