ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಗ್ಯಾರಂಟಿ-ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
ಭಾಗ್ಯನಗರ: ನಮ್ಮ ಜಿಲ್ಲೆಯಲ್ಲಿ ಅತ್ಯಂತ ಹಿರಿಯ ಶಾಸಕನಾಗಿದ್ದೇನೆ ಯಾವುದೇ ಸಂದರ್ಭದಲ್ಲೂ ಪಕ್ಷಕ್ಕೆ ದಕ್ಕೆ ತರುವಂತಹ ಹೇಳಿಕೆ ನೀಡಿಲ್ಲ ಈ ನಿಟ್ಟಿನಲ್ಲಿ ಮುಂದಿನ ಪಟ್ಟಿಯಲ್ಲಿ ಖಂಡಿವಾಗಿಯೂ ನನಗೆ ಸಚಿವ ಸ್ಥಾನ ಸಿಕ್ಕೆ ಸಿಗುತ್ತೆ ಎಂಬ ಭರವಸೆ ನನಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಡಸಿದ್ದಾರೆ.
ಪಟ್ಟಣದ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಾಗೇಪಲ್ಲಿ ಕ್ಷೇತ್ರಕ್ಕೆ 78 ವರ್ಷಗಳಿಂದ ಯಾವುದೇ ಸಚಿವ ಸ್ಥಾನ ನೀಡಿಲ್ಲ ನಾನು 3 ಬಾರಿ ಸತತವಾಗಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಅದರಲ್ಲೂ ಇಡೀ ಜಿಲ್ಲೆಯಲ್ಲಿ ಅತ್ಯಂತ ಹಿರಿಯನಿದ್ದೇನೆ ಪಕ್ಷಕ್ಕಾಗಿ ದುಡಿದ್ದಿದ್ದೇನೆ ಯಾವುದೇ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿಲ್ಲ 2-3 ಬಾರಿ ನಿಗಮ ನೀಡಿದ್ದರೂ ಬೇಡ ಎಂದು ಹೇಳಿದ್ದೇನೆ ಇದರಿಂದ ಪಕ್ಷದ ವರೀಷ್ಟರು ಸಚಿವ ಸ್ಥಾನ ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೆ ಆದ್ದರಿಂದ ನನ್ನ ಅರ್ಹತೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡುತ್ತಾರೆ ಈಗಾಗಲೇ ಸಚಿವ ಸ್ಥಾನ ಅಲಂಕರಿಸಿರುವ ಶಾಸಕರು ಪಕ್ಷ ಸಂಘಟನೆ ಮಾಡಲಿ ಬಿಡಿ ಆಗ ನಮ್ಮಂತಹ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತೆ ಈ ಪಟ್ಟಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಹೊರತು ಪಡಿಸಿ ಹಲವು ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ ಮುಂದಿನ ಪಟ್ಟಿಯಲ್ಲಿ ನಮಗೂ ಮಂತ್ರಿ ಗಿರಿ ಸಿಗುತ್ತೆ ಎಂದರು. ಅವರು ಜೆಜೆಎಂ ಯೋಜನೆಗೆ ಬರುವ ಅನುದಾನ ಎಲ್ಲಾ ಕೇಂದ್ರದ್ದು ಎಂದು ಆದರೆ ರಾಜ್ಯ ಸರಕಾರದ ಅನುದಾನ ಇಲ್ಲ ಎಂಬ ಸಂಸದರ ಹೇಳಿಕೆ ಪ್ರತಿಕ್ರಿಯಿಸಿದ ಶಾಸಕರು ನೋಡಿ ಕೇಂದ್ರ ಸರಕಾರದ ಅನುದಾನ, ರಾಜ್ಯ ಸರಕಾರದ ಅನುದಾನ, ಹಾಗೂ ಸ್ಥಳೀಯ ಅನುದಾನ ಬರುತ್ತೆ ಎಲ್ಲಾ ಅನುದಾನದಿಂದ ಜೆಜೆಎಂ ಕಾಮಗಾರಿ ಮಾಡಲಾಗುತ್ತದೆ ಸಂಸದರು ಯಾವ ವ್ಯಾಖ್ಯಾನದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಅದಕ್ಕೆ ಜೆಜೆಎಂ ಕಾಮಗಾರಿ ಪೂಜೆಗೆ ನಾನು ಬರಲ್ಲ ಅಂತಲೇ ಹೇಳಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ. ವಿ. ಪೂಜಪ್ಪ,ಮಾಜಿ ಸದಸ್ಯ ಬೂರಗಮಡುಗು ನರಸಿಂಹಪ್ಪ,ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ಬಾಬು, ಕೆಡಿಪಿ ಸದಸ್ಯ ಗುಂಟಿಗಾನಪಲ್ಲಿ ಮಂಜುನಾಥರೆಡ್ಡಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಪ್ರಭಾಕರರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಕೆ. ಆರ್. ನರೇಂದ್ರ ಬಾಬು,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ,ಸಿ.ಎನ್.ಬಾಬುರೆಡ್ಡಿ,ಬಿ.ವಿ.ಮಂಜುನಾಥ, ನಾಗರಾಜು, ಶ್ರೀನಿವಾಸ್ ನಾಯ್ಕ್, ಗೊರ್ತಪಲ್ಲಿ ವೆಂಕಟೇಶ್,ಸೇರಿದಂತೆ ಅನೇಕ ಮುಖಂಡರು,ಕಾರ್ಯಕರ್ತರು ಇದ್ದರು.... ವರದಿ ಸುಬ್ಬು ಭಾಗ್ಯನಗರ
What's Your Reaction?