ತಾಲ್ಲೂಕು ದಂಡಾಧಿಕಾರಿಗಳಿಗೆ ಜೆಡಿಎಸ್ ಬಿಎಲ್ಎ ಗ್ರಾಮಾಂತರ ಹಾಗೂ ನಗರ ಪ್ರದೇಶದ ಏಜೆಂಟರ ಪಟ್ಟಿ ಸಲ್ಲಿಕೆ
ಕೆಜಿಎಫ್: ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ, ಜನತಾದಳ (ಜಾತ್ಯತೀತ) ಪಕ್ಷದ ಗ್ರಾಮಾಂತರ ಮತ್ತು ನಗರ ಪ್ರದೇಶದ ಬೂತ್ ಮಟ್ಟದ ಏಜೆಂಟರ(ಬಿಎಲ್ಎ) ಅಧಿಕೃತ ಪಟ್ಟಿಯನ್ನು ಇಂದು ತಾಲ್ಲೂಕು ದಂಡಾಧಿಕಾರಿಗಳಾದ (ತಹಶೀಲ್ದಾರ್) ಭರತ್ ರವರಿಗೆ ಸಲ್ಲಿಸಲಾಯಿತು.
ಕೆಜಿಎಫ್ ನಗರದ ತಾಲ್ಲೂಕು ಆಡಳಿತ ಕಛೇರಿಯಲ್ಲಿ ತಹಸೀಲ್ದಾರ್ ಭರತ್ ರವರಿಗೆ ಬಿಎಲ್ಎ ಏಜೆಂಟ್ ಪಟ್ಟಿಯನ್ನು ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಲಿಯೋ ಜೋಸೆಫ್ ಸಲ್ಲಿಸಿದರು ಈ ವೇಳೆ ಮಾತನಾಡಿದ ಅವರು, ಮುಂಬರುವ ಚುನಾವಣಾ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಜೆಡಿಎಸ್ ಪಕ್ಷವು ಕೆಜಿಎಫ್ ನಲ್ಲಿ ಭದ್ರ ಬುನಾದಿ ಹಾಕಿಕೊಳ್ಳುತ್ತಿದ್ದು, ಅದರ ಭಾಗವಾಗಿ ಈ ಪಟ್ಟಿ ಸಲ್ಲಿಸಲಾಗುತ್ತಿದೆ ಎಂದರು.
ತಾಲ್ಲೂಕಿನ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಾಂತರ ಹಾಗೂ ನಗರ ಪ್ರದೇಶದ ಬೂತ್ಗಳನ್ನು ಒಳಗೊಂಡಂತೆ ಸಕ್ರಿಯ ಕಾರ್ಯಕರ್ತರನ್ನು ಬಿಎಲ್ಎ ಏಜೆಂಟರನ್ನಾಗಿ ನೇಮಿಸಲಾಗಿದೆ ಮುಂಬರುವ ನಗರಸಭೆ ಚುನಾವಣೆಯಲ್ಲಿ 35 ವಾರ್ಡ್ ನಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದು ಈ ಬಾರಿ ಒಮ್ಮತದಿಂದ ಕೆಜಿಎಫ್ ನಲ್ಲಿ ಜೆಡಿಎಸ್ ಪಕ್ಷದ ಅಧಿಕಾರ ಚುಕ್ಕಾಣಿ ಹಿಡಿಯುವ ಭರವಸೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಲಿಯೋ ಜೋಸೆಫ್, ಮುಖಂಡರಾದ, ಜೂನಿಯರ್ ಅಂಥೋನಿ, ಶ್ರೀಧರ್, ದನಶೇಖರ್, ಮುರಳಿ, ಪ್ರಭಾಕರ್ ಸೇರಿದಂತೆ ಉಪಸ್ಥಿತರಿದ್ದರು.
What's Your Reaction?