ನಿನ್ನ ದಾರಿಯಲಿ ಪ್ರಾರ್ಥನೆ
ನಿನ್ನ ಬರವನೆ ಕಾದು ಕುಳಿತೆನು
ಕಳೆದು ಹೋದವು ದಿನಗಳು
ವಿರಹದುರಿಯನು ಸಹಿಸದಾಗಿದೆ
ಬತ್ತಿ ಹೋಗಿವೆ ಕಂಗಳು
ಬಿಸಿಲು ಏರಿದೆ ದಿನ ದಿನದಲಿ
ದಣಿದು ಹೋಗಿವೆ ಜೀವವು
ಮೋಡಗಳೊರಟಿವೆ ಬಿರುಸಲಿ
ಕೊರಗಿ ಹೋಗಿವೆ ಸಂಕುಲವು
ಇಂದ್ರನಿಗೊಂದು ಓಲೆಯ ಬರೆಯಿಸಿ
ಮನುಜರ ಬೇಗೆಯ ನೀಗುವೆಯೆಂದು?
ಓಡುವ ಮೋಡವ ತಡೆದು ನಿಲ್ಲಿಸಿ
ನೀರನು ಘನಿಸಲು ಕೇಳುವೆನಿಂದು!
ಧರೆಯು ಹಾಡಲು ಹಾಡನು ಕೇಳುತಾ
ಆಗಸದೇವಿಗೆ ಸಂತಸವಾಗಿತ್ತು
ಮನುಜನ ಪಾಡನು ನೋಡುತಾ
ಮೋಡವು ಮಳೆಯನು ಸುರಿಸಿತ್ತು
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -560056
ಮೊಬೈಲ್ ನಂ: 9739758558