ಸಾವು...

ಸಾವು...

ಸತ್ತ ಜೀವಕೆ
ತಮಟೆಯ ಶಬ್ದವೇಕೆ !
ಹಾರ ತುರಾಯಿ ಬೇಕೆ?
ಸತ್ತ ಹೆಣ ಶೃಂಗಾರ ಬಲ್ಲುದೆ?

ಸತ್ತವನ ಸುದ್ದಿ ಮುಟ್ಟಿಸಿಬಿಡಿ
ಗೆಳೆಯ ಗೆಳತಿಯರು ಒಂದು
ನಿಟ್ಟಿಸಿರು ಬಿಡಬಹುದು!
ಇಲ್ಲ ಸಂಬಂಧಿಕರು ಕಣ್ಣಂಚಲ್ಲಿ
ಒಂದು ಹನಿ ಉದುರಿಸಬಹುದು!

ಬಾಳಿ ಬದುಕಿದ ಜೀವಕೆ
ಹಗಲು ರಾತ್ರಿಯಲ್ಲಿ ಕಂಡ
ಕನಸುಗಳೆಷ್ಟೋ!
ಸತ್ತವನ ಚಿಂತೆಯೇಕೆ
ಸಂಸಾರವೆಂಬ ಸಾಗರದಲ್ಲಿ ಉಳಿದ
ನೆನಪುಗಳೆಷ್ಟೋ!

ದುಃಖಿಸುವುದೇತಕೆ ತಾವು
ಎಲ್ಲರಂತೆ ಬದುಕಿದ ನನಗೆ !
ಬಳಲುವುದೇತಕೆ ನೀವು
ಬಂಡಿ ಹೊರಡಲಿ ಸ್ಮಶಾನದೆಡೆಗೆ....

ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -೫೬೦೦೫೬
ಮೊಬೈಲ್ ನಂ:9739758558