ನೇಹಾ ಹತ್ಯೆಗೈದ ಫಯಾಜ್ ಗೆ ಗಲ್ಲುಶಿಕ್ಷೆಗೆ ಮುಸ್ಲಿಂ ಸಮಾಜ ಆಗ್ರಹ. 

ನೇಹಾ ಹತ್ಯೆಗೈದ ಫಯಾಜ್ ಗೆ ಗಲ್ಲುಶಿಕ್ಷೆಗೆ ಮುಸ್ಲಿಂ ಸಮಾಜ ಆಗ್ರಹ. 

ಜಗಳೂರು ಸುದ್ದಿ:ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಗೈದ ಫಯಾಜ್ ಗೆ ಕಠಿಣ ಶಿಕ್ಷೆ ನೀಡಲು ಆಗ್ರಹಿಸಿ ತಾಲೂಕು ಮುಸ್ಲಿಂ ಸಮಾಜದಿಂದ ಪ್ರತಿಭಟನೆ ನಡೆಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಹೊಸಬಸ್ ನಿಲ್ದಾಣ,ಮಹಾತ್ಮಗಾಂಧಿ ವೃತ್ತದವರೆಗೆ ಫಯಾಜ್ ವಿರುದ್ದ ಘೋಷಣೆಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಸಮಾಜದ ಮುಖಂಡ ಬರ್ಕತ್ ಅಲಿ ಮಾತನಾಡಿ,ಬಿವಿಬಿ ಕಾಲೇಜಿನಲ್ಲಿ ಕ್ಲಾಸ್ ಮುಗಿಸಿ ನೇಹಾ ಹಿರೇಮಠ ಹೊರಗಡೆ   ಬರುತ್ತಿದ್ದಂತೆ ಚಾಕುವಿನಿಂದ ಹಿರಿದು ಬರ್ಬರ ಹತ್ಯೆಗೈದಿರುವುದು ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆಯಿಲ್ಲದಂತಾಗಿದೆ.ನೇಹಾ ಸಾವಿಗೆ ನ್ಯಾಯ ಬೇಕು, ನಾಡಿನ ಹೆಣ್ಣು ಮಕ್ಕಳಿಗೆ ರಕ್ಷಣೆ ಬೇಕು ಎಂದು ಆಗ್ರಹಿಸಿದರು.

ಸಂದರ್ಭದಲ್ಲಿ ಮಹಾಲಿಂಗಪ್ಪ ಎಚ್.ಎಂ.ಹೊಳೆ,ಸತೀಶ್ ಮಲೆಮಾಚಿಕೆರೆ,ನೂರುಲ್ಲ,ನಜೀರ್ ಅಹಮ್ಮದ್,ಜಮೀಲ್,ಇದಾಯತ್,ಶಾರುಕ್,ಗೋಗುದ್ದು ಅನ್ವರ್,ಗೌಸ್ ಪೀರ್,ಸೇರಿದಂತೆ ಭಾಗವಹಿಸಿದ್ದರು.