ಸುಂಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಪಿ.ನವೀನ್ ಕುಮಾರ್ ಅವಿರೋಧ ಆಯ್ಕೆ

ಸುಂಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಪಿ.ನವೀನ್ ಕುಮಾರ್ ಅವಿರೋಧ ಆಯ್ಕೆ

ಸುಂಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಪಿ.ನವೀನ್ ಕುಮಾರ್ ಅವಿರೋಧ ಆಯ್ಕೆ

ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳ   ಹೋಬಳಿಯ ಸುಂಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಪಿ.ನವೀನ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 12 ನಿರ್ದೇಶಕರ ಸಂಖ್ಯಾಬಲ ಹೊಂದಿರುವ ಸಹಕಾರ ಸಂಘದ ಅಧ್ಯಕ್ಷರ ರಾಜೀನಾಮೆ ಹಿನ್ನಲೆಯಲ್ಲಿ ಶನಿವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎಸ್.ಪಿ.ನವೀನ್ ಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಸಿಡಿಓ ಮಂಜುನಾಥ್ ಕರ್ತವ್ಯ ನಿರ್ವಹಿಸಿದರು. ನೂತನವಾಗಿ ಆಯ್ಕೆಯಾದ ಎಸ್.ಪಿ.ನವೀನ್ ಕುಮಾರ್ ರವರಿಗೆ ಮುಖಂಡರಾದ ಪರಮ ಕೃಷ್ಣೇಗೌಡ, ಎಸ್.ಎನ್.ಜಯರಾಮ್, ಬಾಳಪ್ಪ, ಎ.ಆರ್.ಶಿವರಾಜ್, ಎಸ್.ಬಿ.ಜಗದೀಶ್, ಶಿಲ್ಪಾ ಶ್ರೀನಿವಾಸ್, ಶರತ್ ಕುಮಾರ್, ಸಂಘದ ಉಪಾಧ್ಯಕ್ಷ ಸಿ.ಜಿ.ಕುಮಾರ್, ನಿರ್ದೇಶಕರಾದ ಎಸ್.ಬಿ.ರವಿಕುಮಾರ್, ಕೆ.ಎನ್.ರಾಮಸ್ವಾಮಿ, ಸುನೀತಾ ಹರೀಶ್, ಜ್ಯೋತಿ ರಾಜಮುಡಿಗೌಡ, ನಾಗೇಶ್ ಪರಮ, ಕೆ.ಬಿ.ಚಿನ್ನಸ್ವಾಮಿ, ರಮೇಶ್, ಯಶೋಧಮ್ಮ ಪುಟ್ಟೇಗೌಡ, ಕುಮಾರ ನಾಯ್ಕ, ಸಿಇಒ ನಾಗರಾಜ್, ಎಚ್.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್ ಮಧು ಅಭಿನಂದನೆ ಸಲ್ಲಿಸಿದರು.