ಗುಣಮಟ್ಟದಲ್ಲಿ ರಾಜೀಲ್ಲ, ಕಳಪೆ ಕಾಮಗಾರಿಯಲ್ಲಿ ಮುಲಾಜಿಲ್ಲಾ-ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಗುಣಮಟ್ಟದಲ್ಲಿ ರಾಜೀಲ್ಲ, ಕಳಪೆ ಕಾಮಗಾರಿಯಲ್ಲಿ ಮುಲಾಜಿಲ್ಲಾ-ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಗುಣಮಟ್ಟದಲ್ಲಿ ರಾಜೀಲ್ಲ, ಕಳಪೆ ಕಾಮಗಾರಿಯಲ್ಲಿ ಮುಲಾಜಿಲ್ಲಾ-ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಶಾಸಕರಾದ ಎಸ್. ಎನ್. ಸುಬ್ಬಾರೆಡ್ಡಿ ಯವರ ವಿವೇಕ ಯೋಜನೆಯಡಿ ಮೂರು ಕೋಟಿ ಅನುದಾನದಲ್ಲಿ ಬಾಗೇಪಲ್ಲಿ ವಿಧಾನ ಸಭೆ ಕ್ಷೇತ್ರದ  ಗುಡಿಬಂಡೆ, ಬಾಗೇಪಲ್ಲಿ , ಪಾತಪಾಳ್ಯ ,  ಚೇಳೂರು ಪದವಿ ಪೂರ್ವ ಕಾಲೇಜು ಮೂರು ಕೊಠಡಿಗಳ ನಿರ್ಮಾಣಕ್ಕೆ ತಲಾ 75 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ರಾಜ್ಯ ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಬೇಕು. ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಹಾಗೂ ನೂತನ ಕಟ್ಟಡದ ಕಾಮಗಾರಿಯಲ್ಲ ಯಾವುದೇ ರಾಜಿ ಇಲ್ಲ ಕಳಪೆ ಕಾಮಗಾರಿ ನಡಿಸಿದರೆ ಗುತ್ತಿಗೆದಾರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲ ಸೂಚನೆ ನೀಡಿಸರು. ಈ ಸಂದರ್ಭದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ರೂಪಾ ಪೈ,ಬಿಇಓ ತನುಜಾ, ಸಮನ್ವಯ ಅಧಿಕಾರಿಗಳಾದ ಆರ್.ವೆಂಕರಾಮ್,ಆರ್.ಹನುಮಂತ ರೆಡ್ಡಿ ಉಪನ್ಯಾಸಕರಾದ ಎನ್.ನಾಗರಾಜು, ಅಮೀರ್ ಜಾನ್,ನಾರಾಯಣಪ್ಪ ವೆಂಕಟರಾಮರೆಡ್ಡಿ,ಶ್ರೀನಿವಾಸ್ ರೆಡ್ಡಿ,ಲಕ್ಷ್ಮೀನರಸಿಂಹಪ್ಪ,ಬಿ.ವಿ.ವೆಂಕಟರಮಣ,ಮಂಜುನಾಥ್ ರೆಡ್ಡಿ, ನಜರತ್ ಬೇಗಂ, ಶಿಕ್ಷಕರು ,ಕಾಲೇಜಿನ ವಿಧ್ಯಾರ್ಥಿಗಳು ಹಾಜರಿದ್ದರು.