ರೈತರ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಸಂಯುಕ್ತ ಹೋರಾಟ ಸಮಿತಿಯಿಂದ ಟ್ರಾಕ್ಟರ್ ರ್ಯಾಲಿ
ರೈತರ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಸಂಯುಕ್ತ ಹೋರಾಟ ಸಮಿತಿಯಿಂದ ಟ್ರಾಕ್ಟರ್ ರ್ಯಾಲಿ
ಕೋಲಾರ : ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಹಾಗೂ ರೈತರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳದ ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ನಗರದಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಿದರು. ಗಣ ರಾಜ್ಯೋತ್ಸವದ ಅಂಗವಾಗಿ ನಗರದ ಪ್ರವಾಸಿ ಮಂದಿರದಲ್ಲಿ ಪ್ರಾರಂಭವಾದ ಟ್ರಾಕ್ಟರ್ ರ್ಯಾಲಿಯನ್ನು ಸಿಐಟಿಯು ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಸಂವಿಧಾನದ ಪ್ರತಿಜ್ಞಾ ವಿಧಿ ಭೋಧಿಸಿ ನಂತರ ನಗರದಲ್ಲಿ ಸಂಚರಿಸಿ ಕೇಂದ್ರ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಹಳೆ ಬಸ್ ನಿಲ್ದಾಣದಲ್ಲಿ ಕೊನೆಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಯುಕ್ತ ಹೋರಾಟ ಸಮಿತಿ ಮುಖಂಡರು ದೇಶದಲ್ಲಿ ಎಂಎಸ್ಪಿ ನೀಡುವುದಾಗಿ ನೀಡಿ ಭರವಸೆಗಳನ್ನು ಈಡೇರಿಸದ ಬಿಜೆಪಿ ಸರ್ಕಾರವನ್ನು ಖಂಡಿಸುವುದಲ್ಲದೆ, ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಡಿದ ರೈತರ ಸ್ಮಾರಕ ನಿರ್ಮಾಣಕ್ಕೆ ಭೂಮಿ ನೀಡಲು ವಿಫಲವಾಗಿದೆ ಮೂರು ರೈತ ವಿರೋಧಿ ಕಾನೂನುಗಳು ಮತ್ತು ರೈತರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ರದ್ದುಗೊಳಿಸಬೇಕು ಕಳೆದ 2014ರ ಲೋಕಸಭೆ ಚುನಾವಣೆಗೆ ಮುನ್ನ ನಡೆದ ಚುನಾವಣಾ ರ್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 131 ಸಂದರ್ಭಗಳಲ್ಲಿ ಬೆಳೆಗಳಿಗೆ ಎಂಎಸ್ಪಿ ಭರವಸೆ ನೀಡಿದ್ದರು ಬಿಜೆಪಿ ಸರ್ಕಾರದ ಹತ್ತು ವರ್ಷಗಳ ಆಡಳಿತವು ಈ ವರ್ಷದ ಮೇನಲ್ಲಿ ಕೊನೆಗೊಳ್ಳುವ ನಿರೀಕ್ಷೆಯಿದೆ, ಆದರೆ ಭರವಸೆ ಈಡೇರಿಲ್ಲ ಎಂದು ಆರೋಪಿಸಿದರು. ರೈತರ ಆಂದೋಲನದ ನಂತರ ಕೇಂದ್ರವು ಮೂರು ರೈತ ವಿರೋಧಿ ಕಾನೂನುಗಳನ್ನು ಹಿಂಪಡೆದಿದ್ದರೂ, ಬಿಜೆಪಿ ಸರ್ಕಾರವು ಅವುಗಳನ್ನು ಹಿಂಬಾಗಿಲಿನಿಂದ ಪರಿಚಯಿಸಲು ಪ್ರಯತ್ನಿಸುತ್ತಿದೆ ಕಾರ್ಪೊರೇಟ್ಗಳೊಂದಿಗಿನ ಸರ್ಕಾರದ ಒಪ್ಪಂದಗಳನ್ನು ಮುಂದುವರಿಸಿದೆ ರಾಜ್ಯ ಬಜೆಟ್ಗೆ ಮುಂಚಿತವಾಗಿ ಮಂಡಿಸಬೇಕಾದ ಬೇಡಿಕೆಗಳನ್ನು ಕೃಷಿ ಭೂಮಿಯ ಪುನರುಜ್ಜೀವನ, ಕೆರೆಗಳನ್ನು ಸಂರಕ್ಷಿಸುವ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸುವಂತಹ ಸಣ್ಣ ನೀರಾವರಿ ಯೋಜನೆಗಳ ಒತ್ತಡದಂತಹ ರೈತ ಪರ ಉಪಕ್ರಮಗಳನ್ನು ಬಯಸುತ್ತದೆ. ಯ್ಯಾಲಿಯ ನೇತೃತ್ವವನ್ನು ಸಂಯುಕ್ತ ಹೋರಾಟ ಸಮಿತಿ ಮುಖಂಡರಾದ ಪಿಆರ್ ಸೂರ್ಯನಾರಾಯಣ್, ಅಬ್ಬಣಿ ಶಿವಪ್ಪ, ಟಿಎಂ ವೆಂಕಟೇಶ್, ಕೂಟೇರಿ ನಾಗರಾಜ್, ಪಿ.ಶ್ರೀನಿವಾಸ್, ಎ.ಆರ್.ಬಾಬು, ಪಾತಕೋಟ ನವೀನ್ ಕುಮಾರ್, ಗಂಗಮ್ಮ, ವಿ.ನಾರಾಯಣರೆಡ್ಡಿ, ವೆಂಕಟಪ್ಪ, ಪುಣ್ಯಹಳ್ಳಿ ಶಂಕರ್, ರಮೇಶ್, ಆನಂದ್, ಭೀಮರಾಜ್, ಆಶಾ, ಪೂಜಿತ್ ಕೃಷ್ಣನ್, ಅಶೋಕ್, ಮುನಿಸ್ವಾಮಿಗೌಡ, ಅಪ್ಪಯ್ಯಣ್ಣ, ಸುರೇಶ್ ಬಾಬು, ಅಂಬರೀಷ್, ಮುಂತಾದವರು ವಹಿಸಿದ್ದರು.