ಲೋಕಸಭೆ  ಅಭ್ಯರ್ಥಿ ಕೆವಿ ಗೌತಮ್ ಪರ ಮತಯಾಚನೆ ಮಾಡಿದರು.

ಲೋಕಸಭೆ  ಅಭ್ಯರ್ಥಿ ಕೆವಿ ಗೌತಮ್ ಪರ ಮತಯಾಚನೆ ಮಾಡಿದರು.

ಕೆ

ಜಿಎಫ್ ನಗರದ ಹೈಗ್ರೌಂಡ್ ನಲ್ಲಿ ಕೋಲಾರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆವಿ ಗೌತಮ್ ಪರ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಬೈರತಿ ಸುರೇಶ್ ಹಾಗೂ ಶಾಸಕಿ ರೂಪಕಲಾ ಶಶಿಧರ್ ಮತಯಾಚನೆ ಮಾಡಿದರು. ವಿಶೇಷವಾಗಿ ಕೆಜಿಎಫ್ ನಲ್ಲಿ ತಮಿಳ್ ಭಾಷೆಗರ ಸಂಖ್ಯೆ ಹೆಚ್ಚಾಗಿರುವುದರಿಂದ ಮತವನ್ನು ಸೆಳೆಯಲು ತಮಿಳು ಭಾಷೆಯಲ್ಲಿ ಚುನಾವಣೆ ಭಾಷಣವನ್ನು ಮಾಡಿದರು. ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿ ಕೆಜಿಎಫ್ ನಿಂದ ಬೆಂಗಳೂರಿಗೆ 20 ಸಾವಿರಕ್ಕೂ ಹೆಚ್ಚು ಜನ ಕೆಲಸಕ್ಕೆ ತೆರಳುತ್ತಾರೆ ಆದ್ದರಿಂದ ಇಲ್ಲೇ ನಾವು ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಮೂಲಕ ಸ್ಥಳೀಯ ವಾಗಿ ಉದ್ಯೋಗವನ್ನು ನೀಡುತ್ತೇವೆ ಹಾಗೂ ಬಿಎಂಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರನ್ನು ಖಾಯಂ ಮಾಡಲು ಹಾಗೂ ಬಿಜಿಎಂಎಲ್ ಮನೆಗಳಲ್ಲಿ ವಾಸ ಮಾಡುತ್ತಿರುವ ಮನೆಗಳನ್ನು ಸ್ವಂತ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು ಸಂದರ್ಭದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು