ಶ್ರೀರಾಮಭಕ್ತರ ವಿಶೇಷ ರೈಲಿಗೆ ಬೀಳ್ಕೊಡುಗೆ
ಶ್ರೀರಾಮಭಕ್ತರ ವಿಶೇಷ ರೈಲಿಗೆ ಬೀಳ್ಕೊಡುಗೆ
ಬೆಂಗಳೂರು: ಬೆಂಗಳೂರು ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದಿಂದ ಅಯೋಧ್ಯೆಗೆ ಹೊರಟ ಶ್ರೀ ರಾಮ ಭಕ್ತರನ್ನು ಇಂದು ಬೀಳ್ಕೊಡಲಾಯಿತು. ರಾಜ್ಯದಿಂದ ಹೊರಟ 9 ನೇ ವಿಶೇಷ ರೈಲು ಇದಾಗಿದೆ. ಈ ವಿಶೇಷ ರೈಲಿಗೆ ಕೋಲಾರ ಸಂಸದ ಮುನಿಸ್ವಾಮಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ, ಅಯೋಧ್ಯೆ ಶ್ರೀರಾಮ ಮಂದಿರ ದರ್ಶನ ಅಭಿಯಾನದ ರಾಜ್ಯ ಸಹ ಸಂಚಾಲಕ ಜಗದೀಶ್ ಹೀರೆಮನಿ, ಜಿಲ್ಲಾ ಅಧ್ಯಕ್ಷ ಕೆ.ಎನ್.ವೇಣುಗೋಪಾಲ, ಮುರಳಿ, ವಿಜೇಂದ್ರ ಟಿ.ಡಿ ಹಾಗೂ ಮುಖಂಡರು ರಾಮ ಭಕ್ತರ ಪ್ರಯಾಣಕ್ಕೆ ಶುಭ ಕೋರಿದರು.