ರಾಜ್ಯ ಸರ್ಕಾರಿ ನೌಕರರ ಸಂಘದ ಪರವಾಗಿ ಮನವಿ

ರಾಜ್ಯ ಸರ್ಕಾರಿ ನೌಕರರ ಸಂಘದ ಪರವಾಗಿ ಮನವಿ

ರಾಜ್ಯ ಸರ್ಕಾರಿ ನೌಕರರ ಸಂಘದ ಪರವಾಗಿ ಮನವಿ

ಸಿಂದಗಿ: ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರಿಯಾಶೀಲ ರಾಜ್ಯಾಧ್ಯಕ್ಷರಾಗಿವ ಸಿ ಎಸ್ ಷಡಾಕ್ಷರಿ ಇವರ ಆದೇಶದ ಮೇರೆಗೆ ಎನ್.ಪಿಎಸ್ ರದ್ದತಿ, ಏಳನೇ ವೇತನ ಆಯೋಗದ ತುರ್ತು ಜಾರಿ,ಉಚಿತ ಆರೋಗ್ಯ ಚಿಕಿತ್ಸಾ ಯೋಜನೆಯ ಜಾರಿಯ ಕುರಿತಂತೆ ಸಿಂದಗಿ ಮತಕ್ಷೇತ್ರದ ಶಾಸಕರಾಗಿರುವ ಶ್ರೀ ಅಶೋಕ್ ಮನಗೂಳಿ ಅವರಿಗೆ ದಿ.21 ಮುಂಜಾನೆ 9-30 ಗ೦ಟೆಗೆ ಮನವಿ ಸಲ್ಲಿಸಿ ಹಕ್ಕೊತ್ತಾಯ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ 2024 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕೂಡಾ ಇದೆ ಜಿಲ್ಲಾ ನೌಕರ ಸಂಘದ ಅಧ್ಯಕ್ಷರಾದ ಸುರೇಶ್ ಶೇಡಷ್ಯಳ ಹಾಗೂ ಸಮಸ್ತ ಜಿಲ್ಲಾ ನೌಕರರ ಸಂಘದ  ಪದಾಧಿಕಾರಿಗಳು, ಸಿಂದಗಿ,  ಅಲಮೇಲ್, ಹಾಗೂ ದೇವರ ಹಿಪ್ಪರಗಿ ಮೂರು ತಾಲೂಕಿನ ದಂಡಾಧಿಕಾರಿಗಳು ಇವರು ಭಾಗವಹಿಸುವರು ಆದ ಕಾರಣ ನಮ್ಮ ನಿಮ್ಮೆಲ್ಲರ ಈ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಮಿತ್ಯವಾಗಿ 21 ರಂದು ಸರ್ಕಾರಿ ನೌಕರರ ಸಂಘ ಸಿಂದಗಿ (ತಹಸಿಲ್ದಾರ್ ಕಚೇರಿ ಆವರಣ) ಮುಂಜಾನೆ 9-30 ಗ೦ಟೆಗೆ ಕರಾಸನೌ ಸಂಘ ಸಿಂದಗಿ ಆಲಮೇಲ ಹಾಗೂ ದೇವರ ಹಿಪ್ಪರಗಿ ತಾಲೂಕಿನ ಅಧ್ಯಕ್ಷರು ಕಾರ್ಯಕಾರಿ ಸಮಿತಿ ಸದಸ್ಯರು ಸಮಸ್ಥ ಪದಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರಿ ನೌಕರರು ಸಿಂದಗಿ ತಾಲ್ಲೂಕು ಹಾಗೂ ಎಲ್ಲ ವೃಂದ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ನೌಕರಸ್ಥರು ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ನಿವೃತ್ತ ನೌಕರರು ಭಾಗವಹಿಸಬೇಕು ಎಂದು ಸಿಂದಗಿ ಕ ನೌ ಸಂ ಅಧ್ಯಕ್ಷ ಅಶೋಕ್ ತೆಲ್ಲೂರ ಹಾಗೂ ಆಲಮೇಲ ತಾಲೂಕು ನೌಕರ ಸಂಘದ ಅಧ್ಯಕ್ಷ ರವಿ ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.