ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು

ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು

ಕೋಲಾರ ಕ್ಷೇತ್ರದ ಲೋಕಸಭೆ ಚುನಾವಣೆ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಕೆಜಿಎಫ್ ತಾಲೂಕಿನಲ್ಲಿ ಮಹಾ ವಿಷ್ಣು ಕಲ್ಯಾಣ ಮಂಟಪದಲ್ಲಿ ಕೆಜಿಎಫ್ ತಾಲೂಕಿನ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಾನು ಸಂಸದನಾದ ನಂತರ ಮೊದಲ ಆದ್ಯತೆಯನ್ನು ನೀಡುವುದು ಕೆಜಿಎಫ್ ತಾಲೂಕಿನಲ್ಲಿರುವ ಬಿಜಿಎಂಎಲ್ ಸಮಸ್ಯೆ ಹಾಗೂ ನಿರುದ್ಯೋಗ ಸಮಸ್ಯೆಯನ್ನು ಕೈಗಾರಿಕೆ ಕಾರ್ಖಾನೆಗಳನ್ನು ನಿರ್ಮಾಣ ಮಾಡುವ ಮೂಲಕ ಸ್ಥಳೀಯ ವಾಗಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು. ಮುಖ್ಯವಾಗಿ ಕೋಲಾರ ಜಿಲ್ಲೆಯಲ್ಲಿ ನೀರಿನ ಮೂಲ ಇಲ್ಲದ ಕಾರಣ ಪಕ್ಕದ ರಾಜ್ಯದ ಕೃಷ್ಣ ನೀರಾವರಿಯ ಯೋಜನೆಯನ್ನು ಕೇಂದ್ರ ಸರ್ಕಾರದ ಜೊತೆ ಸೇರಿ ಕೋಲಾರಕ್ಕೆ ಶಾಶ್ವತ ನೀರಾವರಿ ಒದಗಿಸುವುದಾಗಿ ಭರವಸೆ ನೀಡಿದರು ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ.ಚಲವಾದಿ ನಾರಾಯಣಸ್ವಾಮಿ. ಬಿಜೆಪಿ ಮಾಜಿ ಶಾಸಕರು ಮಂಜುನಾಥ್ ಗೌಡ. ವೆಂಕಟಮುನಿ. ನಾರಾಯಣಸ್ವಾಮಿ. ವೈ ಸಂಪಂಗಿ. ಮುಖಂಡ ಸುರೇಶ್ ನಾರಾಯಣ ಕುಟ್ಟಿ ಬಿಜೆಪಿ ಮುಖಂಡರು ಭಾಗವಹಿಸಿದ್ದರು.