ಶ್ರೀ ಕ್ಷೇತ್ರ ದಿಂದ ಸಾಧನ ಸಮಾವೇಶ ಹಾಗೂ ಅನುದಾನ ಕಾರ್ಯಕ್ರಮ

ಶ್ರೀ ಕ್ಷೇತ್ರ ದಿಂದ ಸಾಧನ ಸಮಾವೇಶ ಹಾಗೂ ಅನುದಾನ ಕಾರ್ಯಕ್ರಮ

ಶ್ರೀ ಕ್ಷೇತ್ರ ದಿಂದ ಸಾಧನ ಸಮಾವೇಶ ಹಾಗೂ ಅನುದಾನ ಕಾರ್ಯಕ್ರಮ

ಮಂಡ್ಯ ಜಿಲ್ಲೆಯ ಹೊಸಹಳ್ಳಿ ಯೋಜನಾ ಕಚೇರಿ ವ್ಯಾಪ್ತಿಯ ಹೊಸಹಳ್ಳಿ ವಲಯದ ಸಾಧನಾ ಸಮಾವೇಶ ಹಾಗೂ ಅನುದಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಮಂಡ್ಯ ಶಾಸಕರು ರವಿಕುಮಾರ್ ಗಣಿಗರವರು ದೀಪ ಬೆಳಗಿಸುವ  ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರದಲ್ಲಿ ವಲಯದ ಮೇಲ್ವಿಚಾರಕರು ಎಲ್ಲಾ ಗಣ್ಯರಿಗೆ ಪ್ರೀತಿಪೂರ್ವಕ ಸ್ವಾಗತ ಮಾಡಿ ವಲಯದ ಸಾಧನಾ ವರದಿಯನ್ನು ಮಂಡನೆ ಮಾಡಿದರು. ನಂತರ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಆಗಿರುವ ಶ್ರೀ ಪಿ. ರವಿಕುಮಾರ್ ಗಣಿಗ ರವರು ನಿರ್ಗತಿಕ ಕುಟುಂಬದ ಸದಸ್ಯರಿಗೆ ಮಾಶಾಸನ ಮಂಜೂರಾತಿ ಪತ್ರವನ್ನೂ ವಿತರಿಸಿ ಕಾರ್ಯಕ್ರಮದ ಕುರಿತು ಹಾಗೂ ಯೋಜನೆ ಸಂಘದ ಸದಸ್ಯರಿಗೆ ನೀಡುತ್ತಿರುವ ಸೌಲಭ್ಯದ ಕುರಿತು ಮಾತನಾಡಿದರು. ನಂತರ ಮಾತನಾಡಿದ ಹೊಸಹಳ್ಳಿ ಯೋಜನಾ ಕಚೇರಿಯ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ರವಿ ರವರು ಯೋಜನೆಯಿಂದ ಸಂಘದ ಸದಸ್ಯರು ಆರ್ಥಿಕ ವ್ಯವಹಾರ ಹಾಗೂ ಹಲವು ಯೋಜನೆಯ ಕಾರ್ಯಕ್ರಮಗಳ ಕುರಿತು ತಿಳಿಸಿಕೊಟ್ಟರು. ನಂತರದಲ್ಲಿ ಶ್ರೀ ಆಯ್ಯನ್ ಗೌಡ ಸಬ್ ಇನ್ಸ್ಪೆಕ್ಟರ್ ಪೂರ್ವ ವಲಯ ಮಂಡ್ಯ ರವರು ಸಬ್ಸಿಡಿ ಸಾಲ ಮಂಜೂರಾಗಿರುವ ಸದಸ್ಯರಿಗೆ ಚೆಕ್ ವಿತರಣೆ ಮಾಡುವ ಮಾಡಿದ ನಂತರ ಮಾತನಾಡಿದ ಅವರು ಸಾರ್ವಜನಿಕವಾಗಿ ಭದ್ರತೆ ಪಡೆಯುವ ಬಗ್ಗೆ ತಿಳಿಸಿದರು. ನಂತರ ಶ್ರೀ ಕಾರಸವಾಡಿ ಮಹಾದೇವು ಜಿಲ್ಲಾಧ್ಯಕ್ಷರು ಜನ ಜಾಗೃತಿ ವೇದಿಕೆ, ಮಂಡ್ಯ ಇವರು ನೂತನ ಗಂಗಾ ಸ್ವ ಸಹಾಯ ಸಂಘವನ್ನು ಉದ್ಘಾಟನೆ ಮಾಡಿ ಯೋಜನೆಯಲ್ಲಿ ಆಗುತ್ತಿರುವ ಕೆಲಸಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ರವಿ, ಮೇಲ್ವಿಚಾರಕರು ಮಂಜು, ಕೃಷಿ ಮೇಲ್ವಿಚಾರಕರು ಲೋಕೇಶ್.ಎಸ್, ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು, ಇನ್ನೂ ಇತರರು ಹಾಜರಿದ್ದರು.