ಸಂಭ್ರಮದಿಂದ ರಥ ಎಳೆದ ಭಕ್ತರು

ಸಂಭ್ರಮದಿಂದ ರಥ ಎಳೆದ ಭಕ್ತರು

ಸಂಭ್ರಮದಿಂದ ರಥ ಎಳೆದ ಭಕ್ತರು

ಮುದ್ದೇಬಿಹಾಳ: ಪಟ್ಟಣದ ಬನಶಂಕರಿ ನಗರದಲ್ಲಿರುವ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಸಂಜೆ ಸಾವಿರಾರು ಭಕ್ತರು ತೇರು ಎಳೆದು ಸಂಭ್ರಮಿಸಿದರು. ಇದಕ್ಕೂ ಮುನ್ನ ತೇರನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮದ್ಯಾಹ್ನ ದೇವಿಯ ರಥದ ಕಳಸವನ್ನು ಶಂಕ್ರಪ್ಪ ಗುಡ್ಡದ ಇವರ ಮನೆಯಿಂದ ಕಿಲ್ಲಾದ ಕಾಳಿಕಾದೇವಿ ದೇವಸ್ಥಾನದ ಹತ್ತಿರ ಇರುವ ಬಾವಿಗೆ ಗಂಗಸ್ಥಳಕ್ಕೆ ಕಳಿಸಲಾಗಿತ್ತು. ಸಂಜೆ ಶಿರೋಳ ಗ್ರಾಮದಿಂದ ತೇರಿನ ಹಗ್ಗದ ಜೊತೆ ಕಳಸವನ್ನು ಮೆರವಣಿಗೆಯಲ್ಲಿ ತಂದು ಮಹಾರಥೋತ್ಸವ ನಡೆಸಲಾಯಿತು. ಭಕ್ತರು ತೇರಿನ ಮೇಲೆ ಉತ್ತತ್ತಿ, ಬಾಳೆಹಣ್ಣು, ಅಡಕೆ ಮುಂತಾದವುಗಳನ್ನು ತೂರಿ ಹರಕೆ ತೀರಿಸಿದರು.