ಗುರುರಾಯರ ಸನ್ನಿಧಿಯಲ್ಲಿ ಮನಸ್ವಿ ಗಾಯನ ಸೇವೆ

ಗುರುರಾಯರ ಸನ್ನಿಧಿಯಲ್ಲಿ ಮನಸ್ವಿ ಗಾಯನ ಸೇವೆ

ಗುರುರಾಯರ ಸನ್ನಿಧಿಯಲ್ಲಿ ಮನಸ್ವಿ ಗಾಯನ ಸೇವೆ

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜನವರಿ 26 ಶುಕ್ರವಾರ ಸಂಜೆ ಕೆಂಗೇರಿ ಉಪನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯುವ ಗಾಯಕಿ ಕು|| ಮನಸ್ವಿ ಕಶ್ಯಪ್ ಗಾಯನ ಸೇವೆ ನಡೆಸಿಕೊಟ್ಟರು. ಕಾರ್ಯಕ್ರಮದ ಪ್ರಾರಂಭದಲ್ಲಿ ಹರಿದಾಸರುಗಳನ್ನು, ಯತಿಗಳನ್ನು ಸ್ಮರಿಸುವ "ಗುರುಮಧ್ವರಾಯರಿಗೆ ನಮೋ ನಮೋ" ಎಂಬ ಕೃತಿಯೊಂದಿಗೆ ಆರಂಭಿಸಿ, ಕ್ರಮವಾಗಿ "ವೃಂದಾವನ ನೋಡಿರೋ", "ತೇರಾನೇರಿ ಮೆರೆದು ಬರುವ" ಎಂಬ ಎರಡು 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮೇಲಿನ ಕೃತಿಗಳನ್ನು ಪ್ರಸ್ತುತಪಡಿಸಿ ನಂತರ ಮನೋಭಿಮಾನಿ ಶ್ರೀ ರುದ್ರದೇವರನ್ನು ಕುರಿತ "ಎಂಥಾ ಚೆಲುವಗೆ ಮಗಳನು ಕೊಟ್ಟನು", ಶ್ರೀ ವಾಯುದೇವರನ್ನು ಕುರಿತ "ಘಟಿಕಾಚಲದಿ ನಿಂತ", ತದನಂತರ "ಭಾಗ್ಯದ ಲಕ್ಷ್ಮಿ ಬಾರಮ್ಮ" ಎಂದು ಶ್ರೀ ಲಕ್ಷ್ಮೀದೇವಿಯನ್ನು ಕರೆಯುತ್ತಾ, ಭಗವಂತನ ಕುರಿತಾದ "ವೇಣುನಾದ ಬಾರೋ ವೆಂಕಟರಮಣನೆ ಬಾರೋ", "ರಂಗ ಬಂದ ಬೃಂದಾವನದಲಿ ನಿಂದ", "ಎಂಥವನೆಂಥವನೆ", "ರಾಮ ಭಜನೆ ಮಾಡೋ" ಮುಂತಾದ ಇನ್ನೂ ಹಲವಾರು ಹಾಡುಗಳು ಹಾಡಿ, ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇವರ ಗಾಯನಕ್ಕೆ ವಿ|| ಅಮಿತ್ ಶರ್ಮಾ ಕೀ-ಬೋಡ್೯ ವಾದನದಲ್ಲಿ ಹಾಗೂ ವಿ|| ಸರ್ವೋತ್ತಮ ತಬಲಾ ವಾದನದಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಅನೇಕ ದಾಸಸಾಹಿತ್ಯಾಭಿಮಾನಿಗಳು, ಶ್ರೀ ಮಠದ ಗೌರವ ಅಧ್ಯಕ್ಷರಾದ ಡಾ|| ಸುಧೀಂದ್ರ ಕುಮಾರ್, ಮಠದ ಸಿಬ್ಬಂದಿಗಳು, ಭಾಗವಹಿಸಿದ್ದರು. ಟಿಟಿಡಿ ಡಿಹೆಚ್ ಡಿಪಿಪಿಯ ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಂದನಾರ್ಪಣೆ ಮಾಡಿದರು.