ಸಾರ್ವಜನಿಕರ ಸಮಸ್ಯೆಗಳು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ-ಶಾಸಕ ಎಸ್.ಏನ್.ಸುಬ್ಬಾರೆಡ್ಡಿ

ಸಾರ್ವಜನಿಕರ ಸಮಸ್ಯೆಗಳು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ-ಶಾಸಕ ಎಸ್.ಏನ್.ಸುಬ್ಬಾರೆಡ್ಡಿ

ಸಾರ್ವಜನಿಕರ ಸಮಸ್ಯೆಗಳು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ-ಶಾಸಕ ಎಸ್.ಏನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ: ನಮ್ಮ ಸಮಾಜಕ್ಕೊಂದು ಸ್ಮಶಾನ ನಿರ್ಮಿಸಿಕೊಳ್ಳಲು ಭೂಮಿ ಕೊಡಿ, ನನ್ನ ಮಗನಿಗೆ ಹಾಸ್ಟೆಲ್‌ನಲ್ಲಿ ಅವಕಾಶ ಕಲ್ಪಿಸಿಕೊಡಿ, ಹಲವು ವರ್ಷಗಳಿಂದ ಅಲೆದಾಡಿದರೂ ಹಕ್ಕುಪತ್ರ ಸಿಕ್ಕಿಲ್ಲ. ಸರ್ವೆ ಸಂಖ್ಯೆ ಅದಲು ಬದಲು ಮಾಡಲಾಗಿದ್ದು, ಇದನ್ನು ಸರಿಪಡಿಸಿ,ಉದ್ಯೋಗವಿಲ್ಲದೇ ಅಲೆದಾಡುತ್ತಿದ್ದೇನೆ, ನನಗೊಂದು ನೌಕರಿ ಕೊಡಿ ಎಂದು ಸಾರ್ವಜನಿಕರು ಶಾಸಕರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಪಟ್ಟಣದ ಶಾಸಕ ಎಸ್.ಏನ್. ಸುಬ್ಬಾರೆಡ್ಡಿ ರವರ ಗೃಹ ಕಚೇರಿಯಲ್ಲಿ ಎಂದಿನಂತೆ ಪ್ರತಿ ಬುಧವಾರ ಸಾರ್ವಜನಿಕರ ಅನುಕೂಲಕ್ಕಾಗಿ ಜನತಾ ದರ್ಶನ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸಾರ್ವಜನಿಕರಿಂದ ಬಂದ ಅಹವಾಲುಗಳು ಇವು.ಸ್ವಲ್ಪ ತಡವಾಗಿ ಆರಂಭವಾದ ಕಾರ್ಯಕ್ರಮದಲ್ಲಿ ಒಟ್ಟು 122 ಅರ್ಜಿಗಳು ಸಲ್ಲಿಕೆಯಾದವು. ಶಾಸಕರ ಬಳಿ ಸಮಸ್ಯೆಗಳನ್ನು ಹೇಳಿಕೊಂಡ ಜನರು ಕೆಲ ಅರ್ಜಿಗಳು ವೈಯಕ್ತಿವಾಗಿದ್ದವು. ಖಾಸಗಿ ಶಾಲೆಗೆ ಪ್ರವೇಶ ಕೊಡಿಸಲು ಆರ್ಥಿಕ ನೆರವು ಒದಗಿಸಿ, ಹಳೆ ಪಿಂಚಣಿ ಯೋಜನೆ ಜಾರಿ ಮಾಡಿ, ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಕಲ್ಪಿಸಿ, ಮೂರು ದಶಕಗಳಿಂದ ಸಾಗುವಳಿ ಪತ್ರ ಕೊಟ್ಟಿಲ್ಲ. ಅಣ್ಣ–ತಮ್ಮನ ಆಸ್ತಿ ವಿವಾದವಿದ್ದು ಪರಿಹರಿಸಿಕೊಡಿ, ಭಾಗ್ಯನಗರ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಡಿ, ವಿದ್ಯುತ್‌ ಮೀಟರ್‌ಗೆ ಆರ್‌.ಆರ್‌. ಸಂಖ್ಯೆ ಕೊಡಿ ಹೀಗೆ ಅನೇಕ ಸಮಸ್ಯೆಗಳನ್ನು ಜನ ಹೇಳಿಕೊಂಡರು. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೊಡಿಸುವ ಪ್ರಯತ್ನ ಮಾಡಿದ ಅವರು ಅಧಿಕಾರಿಗಳ ಬಳಿ ಚರ್ಚಿಸಿ ಸಾರ್ವಜನಿಕರ ಸಮಸ್ಯೆಗಳು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂಧರ್ಭದಲ್ಲಿ ತಹಸೀಲ್ದಾರ್ ಪ್ರಶಾಂತ್ ಕೆ. ಪಾಟೀಲ್, ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಪುರಸಭೆ ಮುಖ್ಯಧಿಕಾರಿ ರುದ್ರಮ್ಮ ಶರಣಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ರಮೇಶ್,ಲೋಕೋಪಯೋಗಿ ಇಲಾಖೆ ಪ್ರದೀಪ್, ಮುಖಂಡರರಾದ ಗುಂಟಿಗಾನಪಲ್ಲಿ ಮಂಜುನಾಥ ರೆಡ್ಡಿ, ಬುರಗಮಡಗು ನರಸಿಂಹಪ್ಪ, ಮಲ್ಲಿಕಾರ್ಜುನ ರೆಡ್ಡಿ, ಸುಧಾಕರ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಶಿವ ರಾಮ ರೆಡ್ಡಿ, ಸೇರಿದಂತೆ ವಿವಿಧ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.