51 ಅಗ್ರಹಾರ ವಾರ್ಡಿನಲ್ಲಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯನ್ನು ಸಂಭ್ರಮಿಸಿದ ರಾಮ ಭಕ್ತರು

51 ಅಗ್ರಹಾರ ವಾರ್ಡಿನಲ್ಲಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯನ್ನು ಸಂಭ್ರಮಿಸಿದ ರಾಮ ಭಕ್ತರು

51 ಅಗ್ರಹಾರ ವಾರ್ಡಿನಲ್ಲಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯನ್ನು ಸಂಭ್ರಮಿಸಿದ ರಾಮ ಭಕ್ತರು

ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿನವಾದ ಇಂದು ಮೈಸೂರಿನ ಕೃಷ್ಣರಾಜ ಕ್ಷೇತ್ರದ 51 ಅಗ್ರಹಾರ ವಾರ್ಡಿನಲ್ಲಿ ಪ್ರಭು ಶ್ರೀ ರಾಮ ನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಆತ್ಮೀಯ ಸೇವಾ ಫೌಂಡೇಷನ್ ಅಧ್ಯಕ್ಷರಾದ ಶ್ರೀಧರ್ ರವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಪಾನಕ ಮಜ್ಜಿಗೆ ಮತ್ತು ಸಿಹಿ ಹಂಚುವ ಮೂಲಕ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಫೌಂಡೇಷನ್ ನ ಅಧ್ಯಕ್ಷರಾದ ಶ್ರೀಧರ್, ಅಗ್ರಹಾರ ವಾರ್ಡಿನ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ, ಮತ್ತು ಮೋಹನ್, ಪ್ರಕಾಶ್, ಹಿರಿಯರಾದ ನಂಜುಂಡ ಸ್ವಾಮಿ, ಕಿರಣ್, ಅಜಯ್, ಕಾಳೇಗೌಡ, ನಾಗರಾಜು, ಇನ್ನಿತರು ಭಾಗವಹಿಸಿದ್ದರು.