ಸುದ್ದಿಕಿರಣ ವರದಿ
ಸೋಮವಾರ, ಮೇ 2
ಕಲಾಪ್ರವೀಣ ಪ್ರಶಸ್ತಿಗೆ ಆಯ್ಕೆ
ಉಡುಪಿ: ರಾಗಧನ ಸಂಸ್ಥೆ ಉಡುಪಿ ಆಶ್ರಯದಲ್ಲಿ ಕಲಾವಿಹಾರಿ ಎ. ಈಶ್ವರಯ್ಯ ಸ್ಮರಣಾರ್ಥ ಅವರ ಕುಟುಂಬದವರು ನೀಡುವ ಈ ವರ್ಷದ ಕಲಾಪ್ರವೀಣ ಪ್ರಶಸ್ತಿಗೆ ಖ್ಯಾತ ಹಿರಿಯ ವಿಮರ್ಶಕ, ಸಾಹಿತಿ ಬೆಂಗಳೂರಿನ ಎಸ್. ದಿವಾಕರ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ 10 ಸಾವಿರ ನಗದು ಒಳಗೊಂಡಿದೆ. ಮೇ 15ರಂದು ಅಪರಾಹ್ನ 3 ಗಂಟೆಗೆ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಸಭಾಂಗಣದಲ್ಲಿ ಅಂಕಣಕಾರ, ಸಾಹಿತಿ ಪ್ರೊ. ಮುರಲೀಧರ ಉಪಾಧ್ಯ ಹಿರಿಯಡ್ಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಿಕ್ಷಣ ತಜ್ಞ ಹಾಗೂ ಸಾಹಿತಿ ಡಾ| ಮಹಾಬಲೇಶ್ವರ ರಾವ್ ಅಭಿನಂದನಾ ಭಾಷಣ ಮಾಡಲಿದ್ದಾರೆ.
ನಂತರ ಬೆಂಗಳೂರಿನ ಅದಿತಿ ಪ್ರಹ್ಲಾದ್ ಸಂಗೀತ ಕಛೇರಿ ನಡೆಯಲಿದೆ. ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ಡಾ| ಬಾಲಚಂದ್ರ ಆಚಾರ್ ಸಹಕರಿಸಲಿದ್ದಾರೆ ಎಂದು ರಾಗಧನ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ