ಬೂದನೂರು ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿ‌ ಮಹಿಳೆಯರು ಸಗಣಿ ಸುರಿದುಕೊಂಡು ಪ್ರತಿಭಟನೆ

ಬೂದನೂರು ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿ‌ ಮಹಿಳೆಯರು ಸಗಣಿ ಸುರಿದುಕೊಂಡು ಪ್ರತಿಭಟನೆ

ಬೂದನೂರು ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿ‌ ಮಹಿಳೆಯರು ಸಗಣಿ ಸುರಿದುಕೊಂಡು ಪ್ರತಿಭಟನೆ

ಬೂದನೂರು ನಿವೇಶನರಹಿತರಿಗೆ ಮಂಜೂರಾದ ಭೂಮಿಗೆ‌ ಕೋಟ್೯ ವ್ಯಾಜ್ಯ ಬಗೆಹರಿಸುವ ಬದಲು ಭೂಗಳ್ಳರ ಜೊತೆ ಸೇರಿರುವ ತಹಶೀಲ್ದಾರ್ ಹಾಗೂ ಪ್ರಥಮ‌ ದರ್ಜೆ ಸಹಾಯಕ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಬೂದನೂರು ಸ್ವಂತಮನೆ ನಮ್ಮಹಕ್ಕು  ಹೋರಾಟ ಸಮಿತಿ‌ ಮಹಿಳೆಯರು ಸಗಣಿ ಸುರಿದುಕೊಂಡು ಮಂಡ್ಯ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ರೈತ‌ ಸಂಘದ ನೇತೃತ್ವದಲ್ಲಿ ಅರಂಭವಾದ ಅಹೋರಾತ್ರಿ ಧರಣಿಯಲ್ಲಿ‌ ಪಾಲ್ಗೊಂಡಿರುವ ಸದಸ್ಯರು ನ್ಯಾಯಾಲಯದ ವ್ಯಾಜ್ಯಗಳ ಕುರಿತು ತಪ್ಪು ಮಾಹಿತಿ‌ ನೀಡಿರುವ ಭೂಗಳ್ಳರ ವಿರುದ್ದ ನ್ಯಾಯಾಲಯಕ್ಕೆ ಮನವರಿಕೆ ಮಾಡುವಂತೆ ಮನವಿ ಮಾಡಿದರು. ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸುಳ್ಳು ದಾವೆ ಹೂಡಿರುವ ಬಗ್ಗೆ ನ್ಯಾಯಾಲಯಕ್ಕೆ ಹಾಜರಾಗಲು‌ ಮನವಿ ಮಾಡಿದರೂ‌ ಭೂಗಳ್ಳರ ಪ್ರಭಾವ, ಅಮಿಷಕ್ಕೆ‌ ಬಲಿಯಾಗಿದ್ದಾರೆ ಎಂದರು. ದಲಿತ ಕುಟುಂಬಗಳಿಗೆ‌ ಭೂಮಿ ಸಿಗದಂತೆ ಸಂಚು ಮಾಡಿಕೊಂಡು ಹಕ್ಕುಪತ್ರ ಮಂಜೂರು ಮಾಡಿದರೂ ಭೂಮಿಗೆ ವಿವಿಧ ನ್ಯಾಯಾಲಯಗಳಲ್ಲಿ ದಾವೆ ಹೂಡಲು ತಹಶೀಲ್ದಾರ್ ಪರೋಕ್ಷ ಬೆಂಬಲ‌ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಬೂದನೂರು ಗ್ರಾಮ ವ್ಯಾಪ್ತಿಯಲ್ಲಿ ಸರ್ಕಾರಿ ‌ಭೂಮಿ ಲಪಟಾಯಿಸಲು ಕೆಲವರು ವೇದಮೂರ್ತಿ ಎಂಬ ನಕಲಿ ತಹಶೀಲ್ದಾರ್ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ‌ ವಂಚಿಸುತ್ತಿದ್ದಾರೆ.ಅದಕ್ಕೆ ಅಧಿಕಾರಿಗಳು ಲಕ್ಷಾಂತರ ಲಂಚ ಪಡೆಯುತ್ತಿದ್ದಾರೆ ಎಂದು‌‌ ಆರೋಪಿಸಿದರು. ಮಂಡ್ಯ ಶಾಸಕರು, ಜಿಲ್ಲಾಧಿಕಾರಿಗಳು ಈ ಕುರಿತು ಕ್ರಮ ವಹಿಸುವಂತೆ ಸೂಚಿಸಿದರೂ ಕ್ಯಾರೆ ಎನ್ನತ್ತಿಲ್ಲ ಪ್ರತಿಭಟನೆಯಲ್ಲಿ ಗ್ರಾಪಂ‌ ಮಾಜಿ ಸದಸ್ಯರಾದ ಕುಳ್ಳ, ಸರೋಜಮ್ಮ, ಸತೀಶ, ವಿಜಯ, ಕನಕ, ಕರಿಯಪ್ಪ ಸೇರಿದಂತೆ ಮೊದಲಾದವರಿದ್ದರು.