ಶೇಷಾದ್ರಿಪುರಂ ರಾಯರ ಮಠದಲ್ಲಿ ಮಧ್ವನವಮಿ

ಶೇಷಾದ್ರಿಪುರಂ ರಾಯರ ಮಠದಲ್ಲಿ ಮಧ್ವನವಮಿ

ಶೇಷಾದ್ರಿಪುರಂ ರಾಯರ ಮಠದಲ್ಲಿ ಮಧ್ವನವಮಿ

ಬೆಂಗಳೂರು : ಶೇಷಾದ್ರಿಪುರದ ಪ್ಲಾಟ್ ಫಾರಂ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಫೆಬ್ರವರಿ 18, ಭಾನುವಾರ ಮಧ್ವ ನವಮಿ ಪ್ರಯುಕ್ತ ಬೆಳಗ್ಗೆ ಫಲ-ಪಂಚಾಮೃತ ಅಭಿಷೇಕ, ರಾಯರ ಅಷ್ಟೋತ್ತರ ಪಾರಾಯಣ, ಸುಮಧ್ವ ವಿಜಯ ಪಾರಾಯಣ, ಗುರುಗಳಿಗೆ ವಿಶೇಷ ಅಲಂಕಾರ, ಪವಮಾನ ಹೋಮ,  ರಥೋತ್ಸವದೊಂದಿಗೆ  ಶ್ರೀ ಸುಶಮೀಂದ್ರ ಭಜನಾ ಮಂಡಳಿಯ ಸದಸ್ಯರಿಂದ ಹರಿಭಜನೆ  ನಂತರ ವಿ|| ಸಮೀರಾಚಾರ್ಯ ಮತ್ತು ವಿ|| ಉಡುಪಿ ಕೃಷ್ಣಾಚಾರ್ಯರಿಂದ ಶ್ರೀ ಮಧ್ವಾಚಾರ್ಯರ ಮಹಿಮೆಗಳ ಹಾಗೂ ಆಚಾರ-ವಿಚಾರಗಳ ಕುರಿತು ಪ್ರವಚನ, ಮಹಾಮಂಗಳಾರತಿ, ಅಲಂಕಾರ ಪಂಕ್ತಿ ಸೇವಾ ಮತ್ತು ತೀರ್ಥಪ್ರಸಾದ ಕಾರ್ಯಕ್ರಮಗಳು ಜರುಗಿದವು.