ಶ್ರೀ ಕ್ಷೇತ್ರ ದಿಂದ ಸಾಧನ ಸಮಾವೇಶ ಕಾರ್ಯಕ್ರಮ

ಶ್ರೀ ಕ್ಷೇತ್ರ ದಿಂದ ಸಾಧನ ಸಮಾವೇಶ ಕಾರ್ಯಕ್ರಮ

ಶ್ರೀ ಕ್ಷೇತ್ರ ದಿಂದ ಸಾಧನ ಸಮಾವೇಶ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ (ರಿ) ಭಾರತಿನಗರ ತಾಲೂಕಿನ ಟಿ.ಕೆ ಹಳ್ಳಿ ವಲಯದ ಸಾಧನ ಸಮಾವೇಶ ಕಾರ್ಯಕ್ರಮ ದೀಪ ಪ್ರಜ್ವಲನೆ ಮತ್ತು ಶುಭಾಶೀರ್ವಾದವನ್ನು ಗವಿಮಠ ಡಿ ಹಲಸಹಳ್ಳಿ ಶ್ರೀ ಶ್ರೀ ಷಡಕ್ಷರಿ ಸ್ವಾಮಿಗಳು ನೆರವೇರಿಸಿದರು. ನಂತರ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ರೂವಾರಿ ಧರ್ಮಧಿಕಾರಿಗಳು ಪೂಜ್ಯ ಖಾವಂದರು ಡಾ||ಡಿ.ವೀರೇಂದ್ರ ಹೆಗ್ಗಡೆ ಯವರು ಅನೇಕ ಜನಪರ ಕಾರ್ಯಕ್ರಮದ ಮೂಲಕ ಮನೆ ಮಾತಾಗಿ ಹಳ್ಳಿಯ ಅಭಿವೃದ್ಧಿಯ ಜೊತೆಗೆ ಹಳ್ಳಿಯ ಜನರ ಸರ್ವತೋಮುಖ ಅಭಿವೃದ್ಧಿ ಕಾಯಕಲ್ಪ ನೀಡಿದ ಹರಿಕಾರ ಎಂದರು. ಸಮಾಜದಲ್ಲಿ ಸಂಸ್ಕೃತಿ ಸಂಸ್ಕಾರ ಜೊತೆಗೆ ಬದುಕುವ ಮತ್ತು ಕಲಿಸುವ ವ್ಯವಸ್ಥೆ ಸ್ವ ಸಹಾಯ ಸಂಘಗಳ ಮೂಲಕ ಒಳ್ಳೆಯ ನಡಿಗೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ಸುವರ್ಣ ಗಣಪತಿ ಭಟ್ ಯೋಜನೆ ಕಾರ್ಯಕ್ರಮದ ಬಗ್ಗೆ ಮತ್ತು ಸವಲತ್ತುಗಳ ಬಗ್ಗೆ ಮಾತನಾಡಿದರು. ಜನಮಂಗಲ ಕಾರ್ಯಕ್ರಮದಡಿಯಲ್ಲಿ ಪರಮಪೂಜ್ಯರು ಮಂಜೂರುಗೊಳಿಸಿದ ಪರಿಕರಗಳಾದ ವಾಟರ್ ಬೆಡ್ ನ್ನು ಪಲಾನುಭವಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮತಿ ಸುಜಾತ ಗ್ರಾಮ ಪಂಚಾಯತ್ ಅಧ್ಯಕ್ಷರು ಡಿ ಹಲಸಹಳ್ಳಿ, ಶ್ರೀ ಎ. ಟಿ ಶ್ರಿನಿವಾಸ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆಮಂಡ್ಯ, ಶ್ರೀ ಬಿ. ವೀರಣ್ಣ ಗೌಡ ಅರೋಗ್ಯ ಇಲಾಖೆ ದಬ್ಬಹಳ್ಳಿ. ಶ್ರೀ ಮತಿ ಸುಶೀಲಮ್ಮ ಅಧ್ಯಕ್ಷರು ಡಿ ಹಲಸಹಳ್ಳಿ ಒಕ್ಕೂಟ,ಸಂಫದ ಸದಸ್ಯರು, ಮೇಲ್ವಿಚಾರಕರು,ಊರಿನ ಮುಖಂಡರು ಇನ್ನೂ ಹಲವಾರು ಹಾಜರಿದ್ದರು.