ಚನ್ನರಾಯಪಟ್ಟಣ ತಾಲೂಕು ಭೀಮ್ ಆರ್ಮಿಯ ತಾಲೂಕು ಗಾಯಕ ಮಂಜು ಅವಿರೋಧವಾಗಿ ಆಯ್ಕೆ

ಚನ್ನರಾಯಪಟ್ಟಣ ತಾಲೂಕು ಭೀಮ್ ಆರ್ಮಿಯ ತಾಲೂಕು ಗಾಯಕ ಮಂಜು ಅವಿರೋಧವಾಗಿ ಆಯ್ಕೆ

:ಹಾಸನ ಜಿಲ್ಲಾ ಅಧ್ಯಕ್ಷರಾದ ಪ್ರಸನ್ನ ಅವರು ಅಧ್ಯಕ್ಷತೆಯಲ್ಲಿ ಚನ್ನರಾಯಪಟ್ಟಣದ ಪ್ರವಾಸ ಮಂದಿರದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ಜರುಗಿತು, ಈ ಸಭೆಯಲ್ಲಿ ಮಾತನಾಡಿದ ಪ್ರಸನ್ನ ಅವರು ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಹಾಸನ ಜಿಲ್ಲೆಯಾದ್ಯಂತ ವಿಸ್ತರಿಸುವುದು ಮತ್ತು ಎಲ್ಲಾ ಧರ್ಮ ಮತ್ತು ಸಮುದಾಯಗಳಿಗೆ ಬೆಂಬಲವಾಗಿ ನಿಲ್ಲುವುದು ಭೀಮ್ ಆರ್ಮಿ ಸಂಘಟನೆಯ ಉದ್ದೇಶವಾಗಿದೆ, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇರುವ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಟ ನಡೆಸುವುದು ಹಾಗೂ ಅಂಬೇಡ್ಕರ್ ವಿಚಾರಗಳನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ಈ ಸಂಘಟನೆಯನ್ನು ಪ್ರಾರಂಭಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾಗಿ ಸಿಎನ್ ಮಂಜುನಾಥ್, ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷರಾಗಿ ಮಂಜುನಾಥ,ಪ್ರಧಾನ ಕಾರ್ಯದರ್ಶಿಯಾಗಿ ಇಮ್ರಾನ್ ಪಾಷ, ಉಪಾಧ್ಯಕ್ಷರಾಗಿ ರವಿಕುಮಾರ್,ಸಂಘಟನಾ ಕಾರ್ಯದರ್ಶಿ ಜಬ್ಬರಾಜ, ಸಹ ಕಾರ್ಯದರ್ಶಿ ಹಿದಾಯತ್, ಖಜಾಂಚಿಯಾಗಿ ಹರೀಶ್, ನಗರ ಅಧ್ಯಕ್ಷರಾಗಿ ಪುನೀತ್ ಅವರನ್ನು ನೇಮಕ ಮಾಡಲಾಯಿತು.