ರಾಷ್ಟ್ರೀಯ ಮಟ್ಟದ ವಾಲಿಬಾಲ್ ನಲ್ಲಿ ದ್ವಿತೀಯ ಸ್ಥಾನ

ರಾಷ್ಟ್ರೀಯ ಮಟ್ಟದ ವಾಲಿಬಾಲ್ ನಲ್ಲಿ ದ್ವಿತೀಯ ಸ್ಥಾನ

ರಾಷ್ಟ್ರೀಯ ಮಟ್ಟದ ವಾಲಿಬಾಲ್ ನಲ್ಲಿ ದ್ವಿತೀಯ ಸ್ಥಾನ

ಕೆಜಿಎಫ್: ಗೋವಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಸ್ಟರ್ ಗೇಮ್ಸ್ ವಾಲಿ ಬಾಲ್ ಪಂದ್ಯಾವಳಿಯ ಫೈನಲ್ ನಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಆಟಗಾರರ ಪೈಕಿ ಕೆಜಿಎಫ್ ತಾಲೂಕಿನ ಇಬ್ಬರು ಆಟಗಾರರು ಇದು ಅವರ ಸಾಧನೆಯನ್ನು ಕನ್ನಡ ಪರ ಹೋರಾಟಗಾರರಾದ ವಿ ಎಸ್ ಪ್ರಕಾಶ್ ಕೊಂಡಾಡಿದ್ದಾರೆ. ಈ ಕ್ರೀಡಾಪಟುಗಳು 40 ವರ್ಷ ಮೇಲ್ಪಟ್ಟವರ ಕರ್ನಾಟಕ ವಾಲಿಬಾಲ್ ತಂಡದಲ್ಲಿ ಗೋವಾದಲ್ಲಿ ಫೆಬ್ರವರಿ 8 ರಿಂದ 14ರ  ವರೆಗೆ ನಡೆದ ರಾಷ್ಟ್ರ ಮಟ್ಟದ ಮಾಸ್ಟರ್ ಗೇಮ್ ವಾಲಿಬಾಲ್ ಪಂದ್ಯಾವಳಿಯ ಫೈನಲ್ ನಲ್ಲಿ ಕೇರಳ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಬಹುಮಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಗೋವಾದಲ್ಲಿ ದ್ವಿತೀಯ ಸ್ಥಾನ ಗೆದ್ದ ಆಟಗಾರರು. ಬೆಂಗಳೂರು ದಿನೇಶ್ ಮತ್ತು ಯೋಗರಾಜ್ ಭಟ್.  ಕೆಜಿಎಫ್ ನ. ರಾಘವನ್. ಮತ್ತು ಸುರಳಿ ರಾಜನ್( ಬಾಬು) ಕೋಲಾರ.ಸುರೇಶ್. ಶ್ರೀನಿವಾಸಪುರ ಶ್ರೀನಾಥ್.ಲಕ್ಷ್ಮಿ ನಾರಾಯಣ ರೆಡ್ಡಿ. ಬಂಗಾರಪೇಟೆ ಶಂಕರ್. ಮಾಲೂರು .ಗಂಗಾಧರ್ ಉಮಾ ಶಂಕರ್. ಗೌರಿಬಿದನೂರು ರಾಮು .ಚಿಂತಾಮಣಿ.ರಮೇಶ್. ತಂಡದಲ್ಲಿ ಇದ್ದರು.