ಸಂಸ್ಕೃತಿ ಎತ್ತಿ ಹಿಡಿದ "ನೃತ್ಯ ಸಂಭ್ರಮ"

ಸಂಸ್ಕೃತಿ ಎತ್ತಿ ಹಿಡಿದ "ನೃತ್ಯ ಸಂಭ್ರಮ"

ಸಂಸ್ಕೃತಿ ಎತ್ತಿ ಹಿಡಿದ "ನೃತ್ಯ ಸಂಭ್ರಮ"

ಬೆಂಗಳೂರು: ನೃತ್ಯ ದಿಶಾ ಟ್ರಸ್ಟ್ (ರಿ) ವತಿಯಿಂದ ಜನವರಿ 23ರಂದು ನಗರದ ಕಲಾಗ್ರಾಮದಲ್ಲಿ ಏರ್ಪಡಿಸಿದ್ದ "ನೃತ್ಯ ಸಂಭ್ರಮ" ಕಾರ್ಯಕ್ರಮ ವಿಭಿನ್ನವಾಗಿ ಮೂಡಿಬಂದಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆರ್ ಚಂದ್ರಶೇಖರ್, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಹಿರಿಯ ಪತ್ರಕರ್ತರಾದ ಶ್ರೀ.ಲೇಪಾಕ್ಷಿ ಸಂತಾಷ್ ರಾವ್, ಶ್ರೀ ಪ್ರಸನ್ನ ಪಂಚಾಕ್ಷರಿ ಹಾಗೂ ಶ್ರೀ ಎಂ ಎ ರಂಗಸ್ವಾಮಿ ಅವರು ಕಾರ್ಯಕ್ರಮದ ವಿಶೇಷತೆ ಯನ್ನೂ ಪ್ರಶಂಸಿಸಿದರು. ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ನೃತ್ಯ ದಿಶಾ ಸಂಸ್ಥೆ  ತಲುಪಿಸುತ್ತಿದೆ ಎಂದು ಚಂದ್ರಶೇಖರ್ ನುಡಿದರು. ವಿಭಿನ್ನ ವಾಗಿ ಅನೇಕ ತಂಡಗಳ ಪ್ರಸ್ತುತಿ ಅಮೋಘವಾಗಿತ್ತು. ಅಷ್ಟ ಲಕ್ಷ್ಮಿ, ಸಂಕ್ಷಿಪ್ತ  ರಾಮಾಯಣ, ಗಣೇಶ, ಲಕ್ಷ್ಮಿ, ಪಾರ್ವತಿ ಹೀಗೆ ಅನೇಕ ಅತಿ ಅದ್ಬುತ/ ಅತ್ಯದ್ಭುತ ನೃತ್ಯಗಳು,ರಾಮ ನೃತ್ಯ ರೂಪಕ, ಜನಪದ ನೃತ್ಯಗಳು, ಕರ್ನಾಟಕ ಸಂಗೀತ ಹಾಗೂ ಜನಪದ ಸಂಗೀತ ಪ್ರಸ್ತುತಿ ಸುಂದರವಾಗಿ ಮೂಡಿ ಬಂತು. ನೃತ್ಯ ಸಂಭ್ರಮ ಆಯೋಜನೆ ಮಾಡಿದ ನೃತ್ಯ ದಿಶಾ ಸಂಸ್ಥೆಗೆ ಹಾಗೂ ಗುರು ದರ್ಶಿನಿ ಮಂಜುನಾಥ್ ರವರಿಗೆ, ನೆರೆದಿದ್ದ ಗಣ್ಯರು, ಕಲಾ ರಸಿಕರು, ಕಲಪೋಷಕರು ಅಭಿಮಾನ ಸೂಚಿಸಿದರು.