ಗುರುರಾಯರ ಸನ್ನಿಧಿಯಲ್ಲಿ ಶಿಲ್ಪಾ ಗಾಯನ ಸೇವೆ

ಗುರುರಾಯರ ಸನ್ನಿಧಿಯಲ್ಲಿ ಶಿಲ್ಪಾ ಗಾಯನ ಸೇವೆ

ಗುರುರಾಯರ ಸನ್ನಿಧಿಯಲ್ಲಿ ಶಿಲ್ಪಾ ಗಾಯನ ಸೇವೆ

ಬೆಂಗಳೂರು :  ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ‌ ಜಯನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಫೆಬ್ರವರಿ 22, ಗುರುವಾರದ ಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಅನ್ನದಾನ ಸೇವೆಗಳು ಜರುಗಿದವು. ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ, ಮಹಾಮಂಗಳಾರತಿಯ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ಶಿಲ್ಪಾ ಸುನೀಲ್ ಅವರಿಂದ ಗಾಯನ ಸೇವೆ ನಡೆಯಿತು. "ಶರಣು ಸಿದ್ಧಿವಿನಾಯಕ" ಎಂಬ  ವಿಘ್ನೇಶ್ವರನ ಕೃತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ ಶಿಲ್ಪಾ, ನಂತರ ತಾರತಮ್ಯಾನುಸಾರವಾಗಿ "ರಾಯ ಬಾರೋ ತಂದೆ ತಾಯಿ ಬಾರೋ", "ಶಿವ ಶಿವ ಶಿವ ಎನ್ನಿರೋ" "ಹನುಮ ನಮ್ಮ ತಾಯಿ ತಂದೆ", "ಒಲಿದೆಯಾತಕಮ್ಮ ಲಕುಮಿ ವಾಸುದೇವಗೆ", "ಇಷ್ಟು ದಿನ ಈ ವೈಕುಂಠ", "ಮುರಳಿಯ ನಾದವ ಕೇಳಿ", "ಪಿಳ್ಳಂಗೋವಿಯ ಚೆಲ್ವ ಕೃಷ್ಣನ" ಹೀಗೆ ಇನ್ನೂ ಹಲವಾರು ಅಪರೂಪದ ಹರಿದಾಸರ ಕೃತಿಗಳನ್ನು ಪ್ರಸ್ತುತ ಪಡಿಸಿ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ ಶ್ರೀ ಅಮಿತ್ ಶರ್ಮಾ ಕೀ-ಬೋಡ್೯ ವಾದನದಲ್ಲಿ ಹಾಗೂ ಶ್ರೀ ಸರ್ವೋತ್ತಮ ತಬಲಾ ವಾದನದಲ್ಲಿ ಸಾಥ್ ನೀಡಿದರು. ನಂತರ ಕಲಾವಿದರಿಗೆ ಹಾಗೂ ಭಾಗವಹಿಸಿದ್ದ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಿಸಲಾಯಿತು ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದರು.