ಬೃಹತ್ ಆರೋಗ್ಯ ಶಿಬಿರ ಮತ್ತು ನೇತ್ರದಾನ ಶಿಬಿರ ಹಾಗೂ ರಕ್ತದಾನ ಶಿಬಿರ

ಬೃಹತ್ ಆರೋಗ್ಯ ಶಿಬಿರ ಮತ್ತು ನೇತ್ರದಾನ ಶಿಬಿರ ಹಾಗೂ ರಕ್ತದಾನ ಶಿಬಿರ

ಚನ್ನರಾಯಪಟ್ಟಣ: ಚಿಕ್ಕೋನಹಳ್ಳಿ ಗೇಟ್ ಶ್ರೀ ಸದ್ಗುರು ಸಾಯಿ ಸಿದ್ದಾಶ್ರಮದಲ್ಲಿ 22/2/2024ನೇ ಗುರುವಾರದ ಬೃಹತ್ ಆರೋಗ್ಯ ಶಿಬಿರ ಮತ್ತು ನೇತ್ರದಾನ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಎಂದು ಆಯೋಜಕರಾದ ಮಧು ತಿಳಿಸಿದರು. ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಕರ್ತರ ಉದ್ದೇಶಿಸಿ ಮಾತನಾಡಿದ ಮಧುರವರು  ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿಯ ಚಿಕ್ಕೋನಹಳ್ಳಿ ಗೇಟ್ ಶ್ರೀ ಸದ್ಗುರು ಸಾಯಿ ಸಿದ್ದಾಶ್ರಮದಲ್ಲಿ ಪೂಜ್ಯಶ್ರೀ ಅವಧೂತ ಗುರುಮೂರ್ತಿ ಗುರೂಜಿಯವರ 45ನೇ ಹುಟ್ಟು ಹಬ್ಬದ ಅಂಗವಾಗಿ ಡಾ. ಅಗಲವಾಲ್ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ನೇತ್ರ ಪರೀಕ್ಷಾ ಶಿಬಿರ ಹಾಗೂ ಹಾಸನ ಜಿಲ್ಲಾ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಈ ಕಾರ್ಯಕ್ರಮಕ್ಕೆ ಸರ್ವ ಭಕ್ತಾದಿಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಧು, ಚೇತನ್, ಜಗನ್ನಾಥ್, ಶ್ರೀಕಾಂತ್ ,ಸೇರಿದಂತೆ ಇತರರು ಹಾಜರಿದ್ದರು.