ರಾಶಿ ಗೇಟ್ ವೇ ಕುಟುಂಬದಿಂದ ಸ್ವಚ್ಛತಾ ಆಂದೋಲನ

ರಾಶಿ ಗೇಟ್ ವೇ ಕುಟುಂಬದಿಂದ ಸ್ವಚ್ಛತಾ ಆಂದೋಲನ

ರಾಶಿ ಗೇಟ್ ವೇ ಕುಟುಂಬದಿಂದ ಸ್ವಚ್ಛತಾ ಆಂದೋಲನ

ನೆಲಮಂಗಲ: ನಗರಸಭೆ ವ್ಯಾಪ್ತಿಯ ಜಾಸ್ ಟೋಲ್ ಸಮೀಪವಿರುವ ರಾಶಿ ಗೇಟ್ ವೇ ಬಡಾವಣೆಯ ನಿವಾಸಿಗಳಿಂದ ಬಡಾವಣೆಯ ಸುತ್ತಮುತ್ತ  ಸ್ವಚ್ಛತಾ ಆಂದೋಲನವನ್ನು ನಗರ ಸಭೆ ಸಹಯೋಗದೊಂದಿಗೆ ಆಚರಿಸಲಾಯಿತು. ಇನ್ನು ಬಡಾವಣೆಯ ನಿವಾಸಿ  ರಾಜಣ್ಣ (ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ) ಮಾತನಾಡಿ ಸಾವಿರದ ಏಳುನೂರು ನಿವೇಶನಗಳನ್ನು ಹೊಂದಿರುವ ರಾಶಿ ಬಡಾವಣೆಯಲ್ಲಿ ನೂರಾ ಒಂಬತ್ತು ಪಾರ್ಕ್ ಗಳು ಇವೆ. ನಮ್ಮ ಸುತ್ತಮುತ್ತಲೂ ಉಂಟಾಗುವ ಗಲೀಜಿನಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿದ್ದು, ಸೊಳ್ಳೆಗಳು ಹೆಚ್ಚಾಗಿವೆ. ನಾಗರಿಕರಾಗಿ ನಮ್ಮ ಸುತ್ತಮುತ್ತಲಿನಲ್ಲಿರುವ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ರಾಷ್ಟ್ರಪಿತ ಮಹಾತ್ಮಗಾಂಧಿಯವರು ತಾವೇ ಸ್ವತಃ ಸ್ವಚ್ಛತಾಕಾರ್ಯಕ್ಕೆ ಇಳಿಯುವ ಮೂಲಕ ಪೊರಕೆ ಹಿಡಿದು ನಿಂತಿದ್ದರು. ಅವರ ಅನುಯಾಯಿಗಳಾದ ನಾವು ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಆರೋಗ್ಯಕರವಾದ ಜೀವನ ನಡೆಸಬಹುದಾಗಿದೆ. ವಾರದಲ್ಲಿ ಒಂದು ದಿನ ನಗರ ಸಭೆ ಸಹಯೋಗದೊಂದಿಗೆ ನಮ್ಮ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತೇವೆ  ಮುಂದಿನ ದಿನಗಳಲ್ಲಿ ರಾಶಿ ಬಡವಣೆಯನ್ನು ನೆಲಮಂಗಲ ತಾಲೂಕಿನ ಅತ್ಯುತ್ತಮ ಒಂದು ಮಾದರಿ ಬಡಾವಣೆಯಾಗಿ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ರಾಶಿ ಗೇಟ್ ವೇ ಬಡಾವಣೆಯ ನಿವಾಸಿಗಳಾದ  ಮಣಿಕಂಠ. ರವಿ ಅಂಗಡಿ. ರಮೇಶ್. ಶೈಲಜಾ. ವಸಂತಿ. ಪ್ರಕಾಶ್ ಕಂಠಿ. ಮತ್ತಿತರರು ಉಪಸ್ಥಿತರಿದ್ದರು.