ಗಂಡ-ಹೆಂಡ್ತಿ ಜಗಳ ತಾರಕಕ್ಕೆ-ಪರಸ್ಪರ ಬೆಂಕಿ ಹಚ್ಚಿಕೊಂಡು ಇಬ್ಬರೂ ಸಾವು

ಗಂಡ-ಹೆಂಡ್ತಿ ಜಗಳ ತಾರಕಕ್ಕೆ-ಪರಸ್ಪರ ಬೆಂಕಿ ಹಚ್ಚಿಕೊಂಡು ಇಬ್ಬರೂ ಸಾವು

ಗಂಡ-ಹೆಂಡ್ತಿ ಜಗಳ ತಾರಕಕ್ಕೆ-ಪರಸ್ಪರ ಬೆಂಕಿ ಹಚ್ಚಿಕೊಂಡು ಇಬ್ಬರೂ ಸಾವು

ಬಾಗೇಪಲ್ಲಿ: ಗಂಡ-ಹೆಂಡತಿ ನಡುವಿನ ಜಗಳ ಅಂತಿಮವಾಗಿ ಅವರಿಬ್ಬರನ್ನು ಬಲಿ ತೆಗೆದುಕೊಂಡಿದೆ. ಆಕ್ರೋಶದಲ್ಲಿ ಕೊಟ್ಟ ಬೆಂಕಿಗೆ ಅವರಿಬ್ಬರೂ ಆಹುತಿಯಾಗಿದ್ದಾರೆ. ನಿತ್ಯವೂ ಸಣ್ಣ ಸಣ್ಣ ಕಾರಣಕ್ಕೆ ಜಗಳವಾಡಿಕೊಂಡಿದ್ದ ದಂಪತಿ ನಡುವಿನ ವೈಮನಸ್ಸು ಅಂತಿಮವಾಗಿ ಇಬ್ಬರೂ ಪರಸ್ಪರ ಬೆಂಕಿ ಹಚ್ಚಿಕೊಂಡು  ಸಾಯುವಲ್ಲಿಗೆ ಅಂತ್ಯಗೊಂಡಿದೆ. ಬಾಗೇಪಲ್ಲಿ ತಾಲೂಕಿನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾಗೇಪಲ್ಲಿ ತಾಲೂಕಿನ ಹಿಂದುಕೊರಳಪಲ್ಲಿ ಗ್ರಾಮದ ಮಂಜುನಾಥ್ ಹಾಗೂ ಪ್ರಮೀಳಾ ಮೃತ ದಂಪತಿ. ಅವರಿಬ್ಬರೂ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವು ತಂದುಕೊಂಡಿದ್ದಾರೆ. ಕೌಟುಂಬಿಕ ಕಾರಣಗಳಿಗಾಗಿ ಜಗಳವಾಡುತ್ತಿದ್ದ ಅವರಿಬ್ಬರೂ ಪರಸ್ಪರ ಸೀಮೆ ಎಣ್ಣೆ ಎರಚಿಕೊಂಡಿದ್ದಾರೆ. ಕೊನೆಗೆ ಒಬ್ಬರು ಬೆಂಕಿ ಕೊಟ್ಟಿದ್ದಾರೆ. ಅದರಲ್ಲಿ ಇಬ್ಬರೂ ಸಿಲುಕಿ ಬೆಂದು ಹೋಗಿದ್ದಾರೆ. ಸುಟ್ಟ ಗಾಯಗಳಿಂದ ಗಂಭೀರ ಪರಿಸ್ಥಿತಿಯಲ್ಲಿದ್ದ ದಂಪತಿಯನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಬದುಕುಳಿಯಲಿಲ್ಲ. ಗಂಡ ಹೆಡ್ತಿಯ ಜಗಳದಿಂದಾಗಿ ಮಕ್ಕಳು ಅನಾಥರಾಗಿದ್ದಾರೆ ಒಂದು ಕ್ಷಣ ಯೋಚನೆ ಮಾಡಿದರೆ ಇಂತಹ ಅನಾಹುತಗಳು ನಡೆಯುದಿಲ್ಲ-ನಡೆಯಲು ಬಾರದು ಎಂಬುವುದೇ ಎಲ್ಲರ ಆಸೆಯ.